Site icon Vistara News

Fire accident : ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಕವರ್‌ ಗೋದಾಮಿಗೆ ಬೆಂಕಿ, 20 ಲಕ್ಷ ರೂ.ಗೂ ಹೆಚ್ಚು ಸರಕು ನಷ್ಟ

fire and emergency

#image_title

ಬೆಂಗಳೂರು: ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಪ್ಯಾಕಿಂಗ್ ಕವರ್ ತಯಾರಿಕೆಯ ಘಟಕ ಮತ್ತು ಗೋದಾಮಿಗೆ ಬೆಂಕಿ ತಗುಲಿದೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ವೃಷಭಾವತಿ ನಗರದಲ್ಲಿ ಘಟನೆ ನಡೆದಿದೆ. ಎರಡು ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ವ್ಯಾಪಿಸಿತು.

ಬೆಂಕಿಯ ಕೆನ್ನಾಲಿಗೆಗೆ ಯಂತ್ರೋಪಕರಣಗಳು ಸುಟ್ಟು ಕರಕಲಾಯಿತು. ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ವಾಹನಗಳು ಧಾವಿಸಿವೆ. ಗೋಡೋನ್ ಕ್ಲೋಸ್ ಆದ ಹಿನ್ನಲೆಯಲ್ಲಿ ಕಿಟಕಿ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಬೆಂಗಳೂರಿನ ಯೋಗಿ ಪ್ಲೆಕ್ಸಿಬಲ್ ಪ್ಯಾಕೇಜಿಂಗ್ ಕಂಪನಿಯಲ್ಲಿ ಅವಘಡ ಸಂಭವಿಸಿದೆ. ಯೋಗೇಶ್ ಎಂಬುವವರಿಗೆ ಸೇರಿದ್ದ ಫ್ಯಾಕ್ಟರಿ ಇದಾಗಿದೆ. ಶನಿವಾರ ಸಂಜೆಯೇ ಮಾಲೀಕರು ಕಾರ್ಖಾನೆಯನ್ನು ಕ್ಲೋಸ್ ಮಾಡಿದ್ದರು. ಘಟನೆಯಿಂದಾಗಿ 20 ಲಕ್ಷಕ್ಕೂ ಅಧಿಕ ಸರಕು ನಷ್ಟವಾಗಿದೆ. ಶಾಟ್ ಸರ್ಕ್ಯೂಟ್ ನಿಂದಾಗಿ ಅನಾಹುತ ನಡೆದಿರುವ ಶಂಕೆ ಇದೆ. ಸದ್ಯ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಸ್ಥಳಕ್ಕೆ ಕಾಮಾಕ್ಷಿ ಪ‍ಾಳ್ಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

Exit mobile version