Site icon Vistara News

Road accident: ಬೈಕ್‌ಗೆ ಲಾರಿ ಡಿಕ್ಕಿ: ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಅಪ್ಪ ಸ್ಥಳದಲ್ಲೇ ಸಾವು, ಮಗಳಿಗೂ ಗಾಯ

road accident in doddaballapura

ದೊಡ್ಡಬಳ್ಳಾಪುರ: ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದ ಅಪ್ಪ ಮಗಳ ಕಣ್ಣೆದುರಲ್ಲೇ (Father dies in accident) ಒದ್ದಾಡಿ ಪ್ರಾಣ (Road Accident) ಕಳೆದುಕೊಂಡಿದ್ದಾರೆ. ಮಗಳು ಕೂಡಾ ಗಂಭೀರವಾಗಿ ಗಾಯಗೊಂಡು (Daughter injured) ಆಸ್ಪತ್ರೆ ಸೇರಿದ್ದಾಳೆ. ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಈ ದುರಂತ ನಡೆದಿರುವುದು ದೊಡ್ಡಬಳ್ಳಾಪುರ (Doddaballapura news) ನಗರದ ಎಪಿಎಂಸಿ ಮಾರುಕಟ್ಟೆ ಬಳಿ.

ಗುರುವಾರ ಮುಂಜಾನೆ ಬೈಕ್‌ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ ಅಪ್ಪನನ್ನು ವೆಂಕಟೇಶ್‌ (45) ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಮುದ್ದನಾಯಕನ ಪಾಳ್ಯದ ನಿವಾಸಿಯಾಗಿರುವ ವೆಂಕಟೇಶ್ ಅವರು ಎಂದಿನಂತೆ ತಮ್ಮ ಮಗಳು ಯಶಸ್ವಿನಿ (15)ಯನ್ನು ಶಾಲೆಗೆ ಬಿಡಲೆಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಅವರು ನಗರದ ಎಪಿಎಂಸಿ ಬಳಿ ಸಾಗುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಬೈಕ್‌ ಲಾರಿಯ ಒಳಭಾಗಕ್ಕೆ ಹೋಗಿದೆ. ಡಿಕ್ಕಿಯ ರಭಸಕ್ಕೆ ವೆಂಕಟೇಶ್‌ ಮತ್ತು ಯಶಸ್ವಿನಿ ಹಾರಿ ಬಿದ್ದಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ವೆಂಕಟೇಶ್‌ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ ಯಶಸ್ವಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆಯುತ್ತಿದ್ದಂತೆಯೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ Murder Case : ಅವನಿಗೆ ಕೊಲೆ ಮಾಡಿದ್ದೇ ನೆನಪಿಲ್ಲ, ಕಾರಣ ಮೊದಲೇ ಗೊತ್ತಿಲ್ಲ! ಕಲ್ಲಿನೊಂದಿಗೆ ಠಾಣೆಗೆ ಬಂದವನ ಡೆಡ್ಲಿ ಕತೆ!

Road Accident: ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು

ಶಿರಸಿ:‌ ಸ್ಕೂಟಿಯೊಂದಕ್ಕೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ರಸ್ತೆ ಅಪಘಾತ (Road Accident) ಶಿರಸಿಯ ಯಲ್ಲಾಪುರ ರಸ್ತೆಯ ಅಂಬೇಡ್ಕರ ಭವನ ಬಳಿ ಘಟನೆ ನಡೆದಿದೆ.

ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ದೇವರ ಕೆರಿ ಗ್ರಾಮದ ಗಣೇಶ್ ಕರಾಳೆ(20) ಮೃತ ಯುವಕ. ಕೆಎಸ್ಆರ್ಟಿಸಿ‌ ಬಸ್ ಚಾಲಕನ ಎಡವಟ್ಟಿನಿಂದ ನಡೆದ ಘಟನೆ ಇದಾಗಿದ್ದು, ಯುವಕನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಯಿತು. ತೀವ್ರವಾಗಿ ಗಾಯಗೊಂಡ ಗಣೇಶ್‌, ಆಸ್ಪತ್ರೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟರು. ಶಿರಸಿ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version