Site icon Vistara News

ದೇವರ ದರ್ಶನಕ್ಕೆ ಬಂದು ಪೊಲೀಸರ ಖೆಡ್ಡಕ್ಕೆ ಬಿದ್ದ ಕುಖ್ಯಾತ ರೌಡಿ ಶೀಟರ್

rowdy sheeter

ಬೆಂಗಳೂರು: ಪ್ರತಿವರ್ಷ ಕಡಲೆಕಾಯಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುತ್ತಿದ್ದ ಕುಖ್ಯಾತ ರೌಡಿ ಶೀಟರ್‌ಗೆ ಬಲೆ ಬೀಸಿದ ಪೊಲೀಸರು ಆತನನ್ನು ದೇವಸ್ಥಾನದಲ್ಲೇ ಬಂಧಿಸಿದ್ದಾರೆ.

ರೌಡಿ ಶೀಟರ್‌ ಪೃಥ್ವಿ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರೂ ತಲೆ ಮರೆಸಿಕೊಂಡಿದ್ದ. ಈತ ಬಸವನ ಗುಡಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾನೆ ಎಂದು ತಿಳಿದಿದ್ದ ಬಸವನಗುಡಿ ಪೊಲೀಸರು ಆತನಿಗಾಗಿ ಹೊಂಚು ಹಾಕಿ ಕಾದು ‌ಕುಳಿತಿದ್ದರು. ಹಲವು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಆತ ಕಡಲೆಕಾಯಿ ಪರಿಷೆಗೆ ಬಂದು ಸಿಕ್ಕಿ ಹಾಕಿಕೊಂಡ.

ಪೃಥ್ವಿ ಮೇಲೆ ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿ ಹಲವು ಪ್ರಕರಣಗಳಿವೆ. ಬಸವನಗುಡಿ, ವಿಲ್ಸನ್ ಗಾರ್ಡನ್ ಸೇರಿ ಹಲವು ಠಾಣೆಗಳಲ್ಲಿ ಈತ ವಾಂಟೆಡ್‌ ಆಗಿದ್ದಾನೆ.

ಇದನ್ನೂ ಓದಿ | ಎಲೆಕ್ಷನ್‌ ಹಿನ್ನೆಲೆ‌ಯಲ್ಲಿ ಬೆಂಗಳೂರು ರೌಡಿಗಳು ಚುರುಕು, ಪೊಲೀಸರೂ ಅಲರ್ಟ್!

Exit mobile version