Site icon Vistara News

90 ದಿನಗಳ ಕಾಲ ಕೆಂಗೇರಿ ವಿದ್ಯುತ್‌ ಚಿತಾಗಾರ ಸ್ಥಗಿತ

ವಿದ್ಯುತ್‌ ಚಿತಾಗಾರ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಉನ್ನತೀಕರಣ ಕಾಮಗಾರಿ ಕೈಗೊಂಡಿರುವುದರಿಂದ ನಗರದ ಕೆಂಗೇರಿ ವಿದ್ಯುತ್ ಚಿತಾಗಾರವನ್ನು ಜುಲೈ 16ರಿಂದ ಅಕ್ಟೋಬರ್‌14ರವರೆಗೆ (90 ದಿನಗಳು) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್ ಚಿತಾಗಾರಲ್ಲಿರುವ ಹಾರಿಜಾಂಟಲ್‌ ಕಾಯಿಲ್‌ ಮೌಂಟಿಂಗ್‌ (Horizontal Coil Mounting) ವಿನ್ಯಾಸದಿಂದ ವರ್ಟಿಕಲ್‌ ಕಾಯಿಲ್‌ ಮೌಂಟಿಂಗ್‌ (Vertical Coil Mounting) ವಿನ್ಯಾಸಕ್ಕೆ ಬದಲಿಸುವ ಕಾಮಗಾರಿ ನಡೆಯುತ್ತಿದೆ.

ಹೀಗಾಗಿ ಸಾರ್ವಜನಿಕರು ಈ ಚಿತಾಗಾರಕ್ಕೆ ಮೃತ ದೇಹಗಳನ್ನು ತರುವ ಬದಲು ಪೀಣ್ಯ ಅಥವಾ ಸುಮ್ಮ‌ನಹಳ್ಳಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್‌ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ: ಬೆಸ್ಕಾಂ ಸ್ಪಷ್ಟನೆ

Exit mobile version