Site icon Vistara News

ನೀರು ಚೆಲ್ಲಿದ್ದರಿಂದ ಬಾಲಕನ ಮೇಲೆ ಶಿಕ್ಷಕಿ ಹಲ್ಲೆ, ತಲೆಗೆ ತೀವ್ರ ಗಾಯ

ಶಿಕ್ಷಕಿ ಹಲ್ಲೆ

ಬೆಂಗಳೂರು: ನಗರದ ವೈಟ್‌ಫೀಲ್ಡ್ ಬಳಿಯ ಚನ್ನಸಂದ್ರದ ಎಕೆಜಿ ಕಾಲೊನಿಯ ಅಂಗನವಾಡಿ ಕೇಂದ್ರದಲ್ಲಿ ನೀರು ಚೆಲ್ಲಿದ ಎಂದು ಶಿಕ್ಷಕಿ ಹಲ್ಲೆ ಮಾಡಿದ್ದರಿಂದ ಬಾಲಕನ ತಲೆಗೆ ತೀವ್ರ ಗಾಯವಾಗಿದೆ. ಮೋಕ್ಷಿತ್ (4) ಗಾಯಾಳು. ಸುಬ್ಬಮ್ಮ ಹಲ್ಲೆ ಮಾಡಿರುವ ಅಂಗನವಾಡಿ ಶಿಕ್ಷಕಿ.

ಅಂಗನವಾಡಿಯಲ್ಲಿ ನೀರು ಚೆಲ್ಲಿದ ಎಂದು ಗ್ಲೋಬ್‌ನಿಂದ ಹೊಡೆದಿದ್ದರಿಂದ ಬಾಲಕನ ತಲೆಗೆ ಗಾಯವಾಗಿದೆ. ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲು ಕಾಡುಗೋಡಿ ಠಾಣಾ ಪೊಲೀಸರು ಹಿಂದೇಟು ಹಾಕಿದ್ದು, ಕೇವಲ ಎನ್‌ಸಿಆರ್(ಗಂಭೀರವಲ್ಲದ) ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಾಲಕನ ಕುಟುಂಬಸ್ಥರು ಪೊಲೀಸ್ ಠಾಣೆ ಎದುರು ಜಮಾಯಿಸಿ, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು.

ಇದನ್ನೂ ಓದಿ | PFI | ಪಿಎಫ್‌ಐ ಕಾರ್ಯಕರ್ತರ ಬಂಧನಕ್ಕೆ ಕುಟುಂಬಸ್ಥರ ವಿರೋಧ; ಠಾಣೆ ಎದುರು ಜಮಾವಣೆ

Exit mobile version