Site icon Vistara News

ಪೊಲೀಸ್‌ ಕಾರಿನ ಮೇಲೆ ಬಿದ್ದ ಬೃಹತ್‌ ಮರದ ಕೊಂಬೆ, ಡಿಸಿಪಿ ಮತ್ತು ಚಾಲಕ ಬಚಾವ್‌

traa branch fall

ಬೆಂಗಳೂರು: ಜಯನಗರದ ಡಿಸಿಪಿ ಕಚೇರಿ ಆವರಣದಲ್ಲಿ ಬೃಹತ್ ಗಾತ್ರದ ಮರದ ಕೊಂಬೆಯೊಂದು ಬಿದ್ದು ಡಿಸಿಪಿ ಕಾರು ಜಖಂ ಆಗಿದೆ. ಕೆಲವೇ ನಿಮಿಷಗಳ ಅಂತರದಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಜಯನಗರ ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಕಚೇರಿಗೆ ಆಗಮಿಸಿ ಕಾರಿನಿಂದ ಇಳಿದು ಕಚೇರಿಗೆ ತೆರಳಿದ್ದರು. ಅವರು ತೆರಳಿದ 5 ನಿಮಿಷದಲ್ಲೇ ಮರದ ಕೊಂಬೆ ಕಾರಿನ ಮೇಲೆ ಬಿತ್ತು. ಕಾರಿನಲ್ಲೇ ಕುಳಿತಿದ್ದ ಚಾಲಕ ಫೋನ್‌ ಕರೆ ಬಂದ ಹಿನ್ನೆಲೆಯಲ್ಲಿ ಆಗಷ್ಟೇ ಹೊರ ಬಂದಿದ್ದರು. ಹಾಗಾಗಿ ಅವರೂ ಪಾರಾದರು.

ದಿಢೀರನೆ ಮರದ ಕೊಂಬೆ ಮುರಿದು ಕಾರಿನ ಮೇಲೆ ಬಿದ್ದಿದ್ದು, ಕಾರಿನ ಮುಂಭಾಗ ಹೆಚ್ಚು ಜಖಂಗೊಂಡಿದೆ.

ಇದನ್ನೂ ಓದಿ | Elephanth Death | ವಿದ್ಯುತ್‌ ತಂತಿ ಸ್ಪರ್ಶಿಸಿ ಕಾಡಾನೆಗಳ ಸಾವು

Exit mobile version