Site icon Vistara News

Karnataka election 2023: ಕನಕಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಕಾರಟಗಿಯಲ್ಲಿ ಡಾ. ಮನ್‌ಸುಖ್, ಪ್ರತಾಪ್‌ಸಿಂಹ ರೋಡ್ ಶೋ

Karnataka election 2023 BJP candidate of Kanakagiri Constituency Dr Mansukh Pratapasimha Road Show

ಕಾರಟಗಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಕನಕಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸೂಗೂರ ಅವರ ಪರ ಕೇಂದ್ರ ಆರೋಗ್ಯ ಸಚಿವ ಡಾ. ಮನ್‌ಸುಖ್ ಮಾಂಡವೀಯ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

ಪಟ್ಟಣದ ಪುರಸಭೆ ಬಳಿಯಿಂದ ನವಲಿ ಸರ್ಕಲ್‌ವರೆಗೆ ರೋಡ್ ಶೋ ನಡೆಸಿ, ಮತಯಾಚಿಸಿದರು.

ಇದನ್ನೂ ಓದಿ: Murder Case: ನಡು ರಸ್ತೆಯಲ್ಲಿ ರೌಡಿಶೀಟರ್‌ ಎದೆಗೆ ಫೈರ್‌ ಮಾಡಿದ ದುಷ್ಕರ್ಮಿಗಳು; ಕಾರ್ಪೊರೇಟರ್‌ ಪತಿ ಕಗ್ಗೊಲೆ

ಈ ವೇಳೆ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಅಂದು ಶನಿವಾರವಾಗಿದೆ. ಶನಿವಾರ ಅಂದರೆ ಬಜರಂಗಿ ದಿನ, ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ಸೋಲುವ ದಿನ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ನಮ್ಮ ಅಭ್ಯರ್ಥಿ ಬಸವರಾಜ ದಡೇಸೂಗೂರ ಅವರಿಗೆ ಬೃಹತ್ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version