Site icon Vistara News

BJP Karnataka: ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ತೀವ್ರಗೊಳಿಸಿದ ಚಿತ್ರನಟ ಶಶಿಕುಮಾರ್‌

bjp karnataka actor shashikumar meets cm basavaraj bommai

#image_title

ಬೆಂಗಳೂರು: ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್‌ ಈ ಬಾರಿ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಬಯಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ್ದಾರೆ.

ಆರ್‌.ಟಿ. ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಆಗಮಿಸಿದ ಶಶಿಕುಮಾರ್‌ ಭೇಟಿ ಮಾಡಿದರು. ಇತ್ತೀಚಿಗಷ್ಟೆ ಬಿಜೆಪಿ ಸೇರ್ಪಡೆಯಾಗಿದ್ದ ಶಶಿಕುಮಾರ್, ಚಳ್ಳಕೆರೆ ಅಥವಾ ಮೊಳಕಾಲ್ಮೂರು ಟಿಕೆಟ್ ನೀರಿಕ್ಷೆಯಲ್ಲಿದ್ದಾರೆ.

ಪಕ್ಷದ ವಲಯದಲ್ಲಿ ಟಿಕೆಟ್‌ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆಯೇ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಗುರುವಾರವಷ್ಟೆ ಬಿಜೆಪಿ ರಾಜ್ಯ ಕಚೇರಿಗೂ ಭೇಟಿ ನೀಡಿದ್ದ ಶಶಿಕುಮಾರ್‌, ಸಂಘಟನೆಯ ಪ್ರಮುಖರೊಂದಿಗೂ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: Karnataka Elections 2023 : ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ 13 ಆಕಾಂಕ್ಷಿಗಳು, ಹಾಲಿ ಶಾಸಕ ನಿಂಬಣ್ಣವರ್‌ ಔಟ್‌?

Exit mobile version