Site icon Vistara News

Killer BMTC | ಒನ್‌ವೇನಲ್ಲಿ ನುಗ್ಗಿದ ಬಿಎಂಟಿಸಿ ಬಸ್‌: ಬೈಕ್‌ಗೆ ಡಿಕ್ಕಿಯಾಗಿ ಸವಾರ ದುರ್ಮರಣ

BMTC bus accident

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಬೆಳಗ್ಗೆ ಬಿಎಂಟಿಸಿ ಬಸ್‌ನ ಅವಾಂತರಕ್ಕೆ (Killer BMTC) ಬೈಕ್ ಸವಾರ ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಸುಮನಹಳ್ಳಿ ಸರ್ಕಲ್ ಬಳಿ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ವಿಜಯನಗರ ನಿವಾಸಿಯಾಗಿರುವ ಕುಲದೀಪ್ ಬಗರೇಚ ಎಂದು ಗುರುತಿಸಲಾಗಿದೆ.

ಮೆಜೆಸ್ಟಿಕ್‌ನಿಂದ ಸುಮನಹಳ್ಳಿ ಕಡೆ ಬರುತ್ತಿದ್ದ ಬಿಎಂಟಿಸಿ ಬಸ್‌ ಸುಮನಹಳ್ಳಿ ಡಿಪೋ ಬಳಿ ಹೋಗುತ್ತಿದ್ದಾಗ ಒಮ್ಮೆಗೇ ರಾಂಗ್‌ ರೂಟಿನಲ್ಲಿ ಪ್ರವೇಶ ಪಡೆಯಿತು. ಒನ್‌ವೇಯಲ್ಲಿ ಸಾಗಿದ ಬಸ್‌ ಅಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ರಸ್ತೆಗೆ ಉರುಳಿ ಗಾಯಗೊಂಡರು. ಅವರನ್ನು ಕೂಡಲೇ ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಬದುಕಿಕೊಳ್ಳಲು ಸಾಧ್ಯವಾಗಲಿಲ್ಲ.

ತನ್ನ ನಿರ್ಲಕ್ಷ್ಯದ ಚಾಲನೆಯಿಂದ ಬೈಕ್‌ ಸವಾರನನ್ನು ಬಲಿ ಪಡೆದ ಚಾಲಕ ಮತ್ತು ಬಿಎಂಟಿಸಿ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Road accident | ಆಟೋ ರಿಕ್ಷಾ- ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

Exit mobile version