Site icon Vistara News

Book Release:‌ ನಿಲ್ಲು ನಿಲ್ಲೆ ಪತಂಗ ಮತ್ತು ಮಾಸ್ತಿ ಸಾಹಿತ್ಯ ಪರಿಚಯ ಪುಸ್ತಕ ಬಿಡುಗಡೆ

Nilu Nile Patanga and Masti sahithya parichaya book released at the kannada sahithya Parishath

Nilu Nile Patanga and Masti sahithya parichaya book released at the kannada sahithya Parishath

ಬೆಂಗಳೂರು: ಎನ್‌. ಶೈಲಜಾ ಹಾಸನ ಅವರ “ನಿಲ್ಲು ನಿಲ್ಲೆ ಪತಂಗ” ಕಥಾ ಸಂಕಲನ ಹಾಗೂ ಸಿ.ಎನ್. ಕೃಷ್ಣಮೂರ್ತಿ ಅವರು ರಚಿಸಿರುವ “ಮಾಸ್ತಿ ಸಾಹಿತ್ಯ ಪರಿಚಯ” ಎಂಬ ಪುಸ್ತಕಗಳನ್ನು (Book Release) ಭಾನುವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಅಲ್ಲದೆ, ಎಂ.ಎಲ್.ಆರ್. ಮಧುರ ಸಾಹಿತ್ಯ ಪ್ರಶಸ್ತಿ ಹಾಗೂ ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಕೊಡಮಾಡಲಾಯಿತು.

ಇದೇ ವೇಳೆ ಆಯ್ದ ಲೇಖಕರಿಗೆ ದಿವಂಗತ ಎಂ.ಎಲ್.ರಾಘವೇಂದ್ರ ರಾವ್ ಸ್ಮರಣಾರ್ಥ ಎಂ.ಎಲ್.ಆರ್ ಮಧುರ ಸಾಹಿತ್ಯ ಪ್ರಶಸ್ತಿ ಹಾಗೂ ದಿವಂಗತ ಜಿವಾಜಿರಾವ್ ಮೆಹೆಂದಳೆ ಸ್ಮರಣಾರ್ಥವಾಗಿ ಸಂಜೆ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. ಡಾ.ಕೆ.ಎಂ.ರಶ್ಮಿಯವರು ಎಂ.ಎಲ್.ಆರ್.ಮಧುರ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರೆ, ಲೇಖಕಿ ಶೈಲಜಾ ಹಾಸನ ಅವರು ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಲೇಖಕ ಸಂತೋಷ್ ಕುಮಾರ್ ಮೆಹೆಂದಳೆ, ಸಂಜೆ ಸಾಹಿತ್ಯ ಪ್ರಶಸ್ತಿಯನ್ನು ಲೇಖಕರನ್ನು ಗೌರವಿಸುವ ಸಲುವಾಗಿ ಮಾಡಿದ್ದೇವೆ. ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಈ ರೀತಿಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

ಬಳಿಕ ಮಾತನಾಡಿದ ವಿಕ್ರಂ ಪ್ರಕಾಶನದ ಹರಿಪ್ರಸಾದ ಮೋದ, ನಮ್ಮ ತಂದೆಯವರು ಕನ್ನಡ ಸಾಹಿತ್ಯಕ್ಕೆ 300ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದರು. ಆದರೆ ಅವರಿಗೆ ಯಾವ ಪ್ರಶಸ್ತಿಯನ್ನೂ ಕೊಡಲಿಲ್ಲ, ಅವರ ನೆನಪಿಗಾಗಿ ಲೇಖಕರನ್ನು ಗೌರವಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: Road Accident: ಹಾವೇರಿಯಲ್ಲಿ ರಸ್ತೆ ಅಪಘಾತ, ಮಹಿಳೆ ಸಾವು; ಬೆಂಗಳೂರಿನಲ್ಲಿ ವಾಹನ ಸವಾರರು ಪವಾಡಸದೃಶ ಪಾರು

ನಿಲ್ಲು ನಿಲ್ಲೆ ಪತಂಗ ಹಾಗೂ ಮಾಸ್ತಿ ಸಾಹಿತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವಿಡಿಯೊ ಇಲ್ಲಿದೆ

ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರ ಜಿ ವೆಂಕಟೇಶ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ಟ, ರಂಗಭೂಮಿ ಕಲಾವಿದ ಬಾಬು ಹಿರಣಯ್ಯ, ಕರ್ಮವೀರ ಸಂಪಾದಕ ಅನಿಲ್‌ ಕುಮಾರ್, ಲೇಖಕ ಸಿ.ಎನ್.ಕೃಷ್ಣಮೂರ್ತಿ ಸೇರಿ ಹಲವರು ಭಾಗಿಯಾಗಿದ್ದರು.

ಬೆಂಗಳೂರು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version