Site icon Vistara News

Vistara News Launch | ವಿಸ್ತಾರ ನ್ಯೂಸ್‌ ನಂಬರ್‌ 1 ಚಾನೆಲ್‌ ಆಗಲಿ ಎಂದು ಯಡಿಯೂರಪ್ಪ ಹಾರೈಕೆ

Vistara News Launch

ಬೆಂಗಳೂರು: ಉತ್ತಮ ತಂಡ, ನುರಿತ ಪತ್ರಕರ್ತರು ಹಾಗೂ ಅದ್ಭುತ ನಾಯಕರಿಂದ ಕೂಡಿದ ವಿಸ್ತಾರ ನ್ಯೂಸ್‌ (Vistara News Launch) ರಾಜ್ಯದ ನಂಬರ್‌ 1 ಚಾನೆಲ್‌ ಆಗಿ ಹೊರಹೊಮ್ಮಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಾರೈಸಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಸ್ತಾರ ನ್ಯೂಸ್‌ ಚಾನೆಲ್‌ನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಸ್ತಾರ ನ್ಯೂಸ್‌ ಚಾನೆಲ್‌ ರಾಜ್ಯದ ಮನೆಮಾತಾಗಲಿ. ಅದರಲ್ಲೂ ಮಾಧ್ಯಮ ಲೋಕದಲ್ಲಿ 20 ವರ್ಷ ಅನುಭವ ಹೊಂದಿರುವ, ಯಶಸ್ವಿ ಸಂಪಾದಕರಾಗಿರುವ, ಹೊಸ ಬದಲಾವಣೆಗಳ ಹರಿಕಾರ ಎಂದೇ ಹೆಸರಾದ ಹರಿಪ್ರಕಾಶ್‌ ಕೋಣೆಮನೆ ಅವರು ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾಗಿದ್ದಾರೆ. ಇದಕ್ಕೂ ಮೊದಲು ಎರಡು ಪತ್ರಿಕೆಗಳ ಸಂಪಾದಕರಾಗಿ, ಅವುಗಳನ್ನು ರಾಜ್ಯದ ನಂಬರ್‌ 1 ಪತ್ರಿಕೆಯನ್ನಾಗಿ ರೂಪಿಸಿದ ಅವರ ಬದ್ಧತೆ ಅಪಾರವಾಗಿದೆ. ಅವರ ನಾಯಕತ್ವದಲ್ಲಿ ವಿಸ್ತಾರ ನ್ಯೂಸ್‌ ಯಶಸ್ಸು ಗಳಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಸ್ತಾರ ಮೀಡಿಯಾದ ಎಂಡಿ ಹಾಗೂ ಚೇರ್ಮನ್‌ ಆಗಿರುವ ಎಚ್‌.ವಿ. ಧರ್ಮೇಶ್‌ ಅವರ ಕುರಿತು ಸಹ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. “ಹತ್ತಾರು ಉದ್ಯಮಗಳಲ್ಲಿ ತೊಡಗಿರುವ ಎಚ್‌.ವಿ.ಧರ್ಮೇಶ್‌ ಅವರು ಸಾಮಾಜಿಕ ಕಾಳಜಿಯಿಂದ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ” ಎಂದು ತಿಳಿಸಿದರು.

ಇದನ್ನೂ ಓದಿ | Vistara news Launch | ಗಾಯಕಿ ಪಲ್ಲವಿ ತಂಡದಿಂದ ಗಾನಸುಧೆ

Exit mobile version