Site icon Vistara News

Accident | ಕಾರ್ಕಳ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದು ಪಿಕಪ್‌ ಚಾಲಕ ಸ್ಥಳದಲ್ಲೇ ಮೃತ್ಯು

ಉಡುಪಿ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ದುಗಂಟ್ರಾಯ ತಿರುವಿನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಪಿಕಪ್‌ ಚಾಲಕ ಮೃತಪಟ್ಟಿದ್ದಾರೆ. ಮೃತರನ್ನು ನೆಲ್ಲಿಕಟ್ಟೆ ನಿವಾಸಿ ಸಂತೋಷ್‌ ನಾಯಕ್‌ ಎಂದು ಗುರುತಿಸಲಾಗಿದೆ.

ಖಾಸಗಿ ಬಸ್‌ ಮತ್ತು ಪಿಕಪ್‌ ಮಧ್ಯೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿಗೆ ಹೋಗುವ ಖಾಸಗಿ ಬಸ್‌ ಹಿರ್ಗಾನದಿಂದ ಕಾರ್ಕಳ ಕಡೆಗೆ ಬರುತ್ತಿದ್ದರೆ, ಪಿಕಲ್‌ ಕಾರ್ಕಳದಿಂದ ಹೆಬ್ರಿ ಕಡೆಗೆ ಸಾಗುತ್ತಿತ್ತು. ಎರಡೂ ವಾಹನಗಳು ದುಗಂಟ್ರಾಯ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ವೇಳೆ ಪಿಕಪ್‌ ಚಾಲಕ ಸಂತೋಷ್‌ ನಾಯಕ್‌ ಅವರು ಹೊರಗೆ ಎಸೆಯಲ್ಪಟ್ಟು ಪೊದೆಗೆ ಬಿದ್ದಿದ್ದಾರೆ. ಅವರ ಎದೆ ಮತ್ತು ತಲೆ ಭಾಗಕ್ಕೆ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ನಡುವೆ, ದ್ವಿಚಕ್ರ ವಾಹನ ಸವಾರ ಉದಯ ಶೆಟ್ಟಿ ಎಂಬವರಿಗೂ ಗಾಯಗಳಾಗಿವೆ.

ಅತೀ ವೇಗದಿಂದ ಬಸ್ ಚಲಾಯಿಸಿಕೊಂಡು ಬಂದ ಅಪಘಾತ ಎಸಗಿದ್ದಾರೆ ಎಂದು ಚಾಲಕನ ವಿರುದ್ಧ ಕಾರ್ಕಳ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಇದನ್ನೂ ಓದಿ | Accident |ಬೈಕ್‌ಗೆ ಡಿಕ್ಕಿ ಹೊಡೆದು ಅಪರಿಚಿತ ವಾಹನ ಪರಾರಿ, ಯುವಕ ಸ್ಥಳದಲ್ಲೇ ಸಾವು

Exit mobile version