Site icon Vistara News

Chikkamagakuru Jilla Utsava: ಜಿಲ್ಲಾ ಉತ್ಸವದಲ್ಲಿ ಎತ್ತಿನ ಗಾಡಿ ಓಡಿಸಿದ ಸಿ.ಟಿ. ರವಿ; ಕೃಷಿ ಕಾರ್ಯಕ್ರಮಕ್ಕಾಗಿ ಅಣ್ಣಾಮಲೈ ಭಾಗಿ

CT Ravi in chikkamagaluru utsava

ಚಿಕ್ಕಮಗಳೂರು: ಬುಧವಾರದಿಂದ (ಜ.೧೮) ಪ್ರಾರಂಭವಾಗಿರುವ ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ (Chikkamagakuru Jilla Utsava) ಗುರುವಾರ (ಜ. ೧೯) ಸ್ಥಳೀಯ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎತ್ತಿನಗಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಸ್ವತಃ ಅವರೇ ಗಾಡಿ ಓಡಿಸಿದರು.

ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿ ಎತ್ತಿನ ಗಾಡಿ ಓಡಿಸದ ಸಿ.ಟಿ.ರವಿ ರವಿ ಅವರ ಜತೆ ಜಿಲ್ಲಾಧಿಕಾರಿ, ಸಿಇಒ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಕಚೇರಿವರೆಗೂ ಎತ್ತಿನಗಾಡಿಯನ್ನು ಚಲಾಯಿಸಲಾಯಿತು.

ಅಣ್ಣಾಮಲೈಗೆ ಆತ್ಮೀಯ ಸ್ವಾಗತ
ತಮಿಳುನಾಡು ಐಎಎಸ್‌ ಅಧಿಕಾರಿ ಅಣ್ಣಾಮಲೈ ಅವರನ್ನು ಸಿ.ಟಿ. ರವಿ ಆತ್ಮೀಯವಾಗಿ ಬರಮಾಡಿಕೊಂಡರು. ಜಿಲ್ಲಾ ಉತ್ಸವದಲ್ಲಿ ಗುರುವಾರ ಹಮ್ಮಿಕೊಂಡಿರುವ ಕೃಷಿ ಮೇಳದ ಎರಡು ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಭಾಗಿಯಾಗಲಿದ್ದಾರೆ. ಮಧ್ಯಾಹ್ನದ ನಂತರ ತಮಿಳುನಾಡಿಗೆ ವಾಪಸಾಗಲಿದ್ದಾರೆ.

ಇದನ್ನೂ ಓದಿ | INS Vikramaditya: ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಿಂದ ಈ ಮಾಸಾಂತ್ಯಕ್ಕೆ ನೌಕಾಯಾನ?

Exit mobile version