Site icon Vistara News

Road accident | ಕ್ಯಾಂಟರ್, ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬಾಗಲಕೋಟೆ ಅಪಘಾತ

ಬಾಗಲಕೋಟೆ: ಕ್ಯಾಂಟರ್ ಲಾರಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ (Road accident) ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡು, ಹಲವರಿಗೆ ಗಾಯಗಳಾಗಿವೆ.

ಬಾಗಲಕೋಟೆಯ ಗದ್ದನಕೇರಿ ಸಮೀಪವಿರುವ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದ್ದು, ಅರಕೇರಿ ಗ್ರಾಮದ ವಿದ್ಯಾರ್ಥಿ ರಾಹುಲ್‌ ಮೃತಪಟ್ಟಿದ್ದಾನೆ.

ರಸ್ತೆಯಿಂದ ಕೆಳಗೆ ಬಿದ್ದಿರುವ ಬಸ್‌

ಬಸ್ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿದ್ದರೆ, ಕ್ಯಾಂಟರ್‌ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಹೊರಟಿತ್ತು. ಕ್ಯಾಂಟರ್ ಚಾಲಕನ ಅತಿ ವೇಗದಿಂದಾಗಿ ಅದು ಹೋಗಿ ಬಸ್ಸಿಗೆ ಗುದ್ದಿದೆ. ಬಸ್‌ ನಿಯಂತ್ರಣ ತಪ್ಪಿ ಕೆಳಗಿನ ತಗ್ಗಿನ ಪ್ರದೇಶಕ್ಕೆ ಬಿದ್ದಿದೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬೀಳಗಿ ತಾಲೂಕಿನ ಅರಕೇರಿ ಗ್ರಾಮದ ರಾಹುಲ್‌ ಪಿಯುಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಅಪಘಾತದ ರಭಸಕ್ಕೆ ರಾಹುಲ್‌ನ ದೇಹ ತುಂಡು ತುಂಡಾಗಿ ಬಿದ್ದಿರುವ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿತ್ತು.

ಉರುಳಿಬಿದ್ದಿರುವ ಕ್ಯಾಂಟರ್

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Road accident | ಚಾಲಕನ‌‌ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್: 30 ಪ್ರಯಾಣಿಕರಿಗೆ ಗಾಯ

Exit mobile version