Site icon Vistara News

Car Fire : ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಕಾರು; ಚಾಲಕ ಸಜೀವ ದಹನ

Car Fire in Nelmanagala Car driver burnt alive

ಬೆಂಗಳೂರು: ಚಲಿಸುತ್ತಿದ್ದಾಗಲೇ ಕಾರಿನ ಎಂಜಿನ್‌ನಲ್ಲಿ (car Fire) ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ. ಇತ್ತ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸಜೀವ ದಹನವಾಗಿದ್ದಾನೆ. ನೆಲಮಂಗಲದ ಟೋಲ್ ಬಳಿಯ ಪಾರ್ಲೆ ಜಿ ಬಳಿ ಈ ದುರಂತ ನಡೆದಿದೆ.

ಬೆಂಗಳೂರು ಉತ್ತರ ತಾಲೂಕು ಅಂಚೆಪಾಳ್ಯದಲ್ಲಿ ಎರ್ಟಿಗಾ ಸಿಎನ್‌ಜಿ ಕಾರು ಭಸ್ಮವಾಗಿದೆ. ನೆಲಮಂಗಲ ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಕಾರು ಪೂರ್ತಿ ಬೆಂಕಿ ಆವರಿಸಿಕೊಂಡಿದೆ. ಕಾರಲ್ಲಿದ್ದ ಚಾಲಕ ಕಿರುಚಾಡಿಕೊಂಡಿದ್ದಾನೆ. ಬೆಂಕಿ ದಟ್ಟವಾಗಿದ್ದರಿಂದ ಸ್ಥಳೀಯರಿಗೂ ಸಹಾಯಕ್ಕೆ ಧಾವಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಇತ್ತ ಘಟನೆಯಿಂದ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್ ಉಂಟಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಗುರುತು ಪತ್ತೆಯಾಗಿಲ್ಲ.

ರಸ್ತೆ ಬದಿ ಅಡುಗೆ ಮಾಡುವಾಗ ಸ್ಟವ್ ಸ್ಫೋಟ; ಹೊತ್ತಿ ಉರಿದ ಲಾರಿ, ಚಾಲಕನಿಗೆ ಗಾಯ

ವಿಜಯಪುರ: ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದು ಹೊತ್ತಿ ಉರಿದಿದೆ. ಫ್ಲೈವುಡ್ ತುಂಬಿದ್ದ ಲಾರಿಯು ಸುಟ್ಟು ಭಸ್ಮವಾಗಿದೆ. ರಸ್ತೆಬದಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡುವಾಗ ಅಚಾನಕ್‌ ಆಗಿ ಸ್ಟವ್‌ ಸ್ಫೋಟಗೊಂಡಿದೆ. ಪಕ್ಕದಲ್ಲೇ ನಿಂತಿದ್ದ ಲಾರಿಗೆ ಬೆಂಕಿ ಆವರಿಸಿದೆ. ನೋಡನೋಡುತ್ತಿದ್ದಂತೆ ಲಾರಿ ಹೊತ್ತಿ ಉರಿದಿದೆ.

ನಿಡಗುಂದಿ ತಾಲೂಕಿನ ಉಣ್ಣಿಬಾವಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಘಟನೆ ನಡೆದಿದೆ. ಡಾಬಾ ಬಳಿ ತಮಿಳುನಾಡು ಮೂಲದ ಲಾರಿ ನಿಲ್ಲಿಸಿ ಚಾಲಕ ಅಡುಗೆ ಮಾಡುತ್ತಿರುವಾಗ ಸ್ವವ್‌ ಸ್ಫೋಟಗೊಂಡಿದೆ. ಸ್ಫೋಟಗೊಂಡ ಪರಿಣಾಮ ಪಕ್ಕದಲ್ಲಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಿಂದ ಚಾಲಕನ ಕೈ, ಕಾಲು ಮತ್ತಿತರ ಭಾಗಕ್ಕೆ ತೀವ್ರ ಸುಟ್ಟ ಗಾಯವಾಗಿದೆ.

ತಮಿಳುನಾಡು ಮೂಲದ ಲಾರಿಯು ಫ್ಲೈವುಡ್‌ ತುಂಬಿಕೊಂಡು ಕೇರಳದಿಂದ ಸೊಲ್ಲಾಪುರಕ್ಕೆ ಹೊರಟಿತ್ತು. ಘಟನಾ ನಂತರ ಬಸವನ ಬಾಗೇವಾಡಿಯಿಂದ ಎರಡು ಗಂಟೆ ಬಳಿಕ ಅಗ್ನಿ ಶಾಮಕ ದಳದ ವಾಹನ ದೌಡಯಿಸಿದೆ. ಅಷ್ಟರಲ್ಲಿ ಲಾರಿಯು ಸುಟ್ಟು ಭಸ್ಮವಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version