Site icon Vistara News

A Narayanaswamy: ವಿಸ್ತಾರ ನ್ಯೂಸ್‌ ಕಚೇರಿಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭೇಟಿ, ಶುಭ ಹಾರೈಕೆ

Central Minister A Narayanaswamy Visits Vistara News Channel Office

Central Minister A Narayanaswamy Visits Vistara News Channel Office

ಬೆಂಗಳೂರು: ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಸಹಾಯಕ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಅವರು ಮಂಗಳವಾರ (ಮಾರ್ಚ್‌ 4) ವಿಸ್ತಾರ ನ್ಯೂಸ್‌ ಕಚೇರಿಗೆ ಭೇಟಿ ನೀಡಿದರು. ಇದೇ ವೇಳೆ ವಿಸ್ತಾರ ಸುದ್ದಿಮನೆಯ ಆಗು-ಹೋಗುಗಳ ಕುರಿತು ಮಾಹಿತಿ ಪಡೆದ ಅವರು, ನ್ಯೂಸ್‌ ಚಾನೆಲ್‌ನಲ್ಲಿ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ನಾರಾಯಣಸ್ವಾಮಿ ಅವರು ಹರಿಪ್ರಕಾಶ್‌ ಕೋಣೆಮನೆ ಅವರಿಂದ ಚಾನೆಲ್‌ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು.

ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ಅವರು ನಾರಾಯಣಸ್ವಾಮಿ ಅವರಿಗೆ ವಿಸ್ತಾರ ಮೀಡಿಯಾ ಸಂಸ್ಥೆಯ ಟಿವಿ ಚಾನೆಲ್, ವೆಬ್‌ಸೈಟ್‌, ಯುಟ್ಯೂಬ್ ಚಾನೆಲ್, ವಿಸ್ತಾರ ಪ್ರಕಾಶನ‌ ಸೇರಿ ಹಲವು ಪ್ರಯೋಗಗಳ ಕುರಿತು ಮಾಹಿತಿ ನೀಡಿದರು. ವಿಸ್ತಾರ ಮೀಡಿಯಾ ಸಂಸ್ಥೆಯ ಭವಿಷ್ಯದ ಯೋಜನೆಗಳ ಕುರಿತೂ ಸಂಕ್ಷಿಪ್ತವಾಗಿ ವಿವರಿಸಿದರು. ಇದೇ ವೇಳೆ ಸಚಿವರನ್ನು ವಿಸ್ತಾರ ಮೀಡಿಯಾ ವತಿಯಿಂದ ಸನ್ಮಾನಿಸಲಾಯಿತು.

ವಿಸ್ತಾರ ನ್ಯೂಸ್‌ ಸಿಬ್ಬಂದಿ ಜತೆ ಸಚಿವ ನಾರಾಯಣಸ್ವಾಮಿ ಚರ್ಚೆ.

ವಿಸ್ತಾರ ನ್ಯೂಸ್‌ ಚಾನೆಲ್‌ನ ಸ್ಟುಡಿಯೋ, ಪಿಸಿಆರ್‌ ಸೇರಿ ಪ್ರತಿಯೊಂದು ವಿಭಾಗಗಳಿಗೆ ತೆರಳಿದ ಸಚಿವರು, ಅವುಗಳ ಕಾರ್ಯನಿರ್ವಹಣೆ, ಅಳವಡಿಸಿಕೊಂಡ ತಂತ್ರಜ್ಞಾನ, ಸಿಬ್ಬಂದಿಯ ವಿಭಾಗವಾರು ಜವಾಬ್ದಾರಿ ಸೇರಿ ವಿವಿಧ ಮಾಹಿತಿ ಪಡೆದರು. ಹಾಗೆಯೇ, ವಿಸ್ತಾರ ಮೀಡಿಯಾದ ಎಲ್ಲ ಪ್ರಯೋಗಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ವಿಸ್ತಾರ ನ್ಯೂಸ್‌ ಸಿಬ್ಬಂದಿಯ ಜತೆಗೂ ಆತ್ಮೀಯವಾಗಿ ಅವರು ಸಂವಾದ ನಡೆಸಿದರು.

ಇದನ್ನೂ ಓದಿ: ವಿಸ್ತಾರ ನ್ಯೂಸ್‌ ಕಚೇರಿಗೆ ರಣದೀಪ್‌​ ಸಿಂಗ್ ಸುರ್ಜೇವಾಲ ಭೇಟಿ; ವಿಸ್ತಾರ ತಂಡದ ಕಾರ್ಯಕ್ಕೆ ಮೆಚ್ಚುಗೆ

Exit mobile version