Site icon Vistara News

ಎಬಿವಿಪಿಗೆ ಬೆಣ್ಣೆ, ಸಿಎಫ್‌ಐ ಕಾರ್ಯಕರ್ತರಿಗೆ ಸುಣ್ಣ, ಯಾಕೆ ಹೀಗೆ ಎಂದು ಪ್ರಶ್ನಿಸಿದ ಕ್ಯಾಂಪಸ್‌ ಫ್ರಂಟ್‌

koppala

ಬೆಂಗಳೂರು: ಗೃಹ ಸಚಿವರ ಮನೆಗೇ ನುಗ್ಗಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರಿಗೆ ಏನೂ ಮಾಡದೆ ಬಿಟ್ಟುಬಿಡುತ್ತೀರಿ. ಆದರೆ, ಪ್ರತಿಭಟನೆ ನಡೆಸಿದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಗುತ್ತದೆ. ಯಾಕೆ ಹೀಗೆ? ಎಂದು ಪ್ರಶ್ನಿಸಿದ್ದಾರೆ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಕಾರ್ಯದರ್ಶಿ ಸರ್ಫ್ ರಾಜ್.

ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಮವಾರ ಕೊಪ್ಪಳಕ್ಕೆ‌ ಮುಖ್ಯಮಂತ್ರಿ ತೆರಳಿದ ವೇಳೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾದ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅವರನ್ನು ಕೊಪ್ಪಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದು ಅನ್ಯಾಯ ಎಂದು ಅವರು ಹೇಳಿದ್ದಾರೆ.

ಕ್ಯಾಂಪಸ್ ಪ್ರಂಟ್ ಕಾರ್ಯ ಕರ್ತರ ಮೇಲೆ ದಾಖಲಾದ ಪ್ರಕರಣ ವಾಪಸು ಪಡೆಯಬೇಕು. ವಿದ್ಯಾರ್ಥಿಗಳನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

ಎಂಟು ದಿನಗಳ ಒಳಗೆ ಅವರ ಮೇಲಿನ ಕೇಸನ್ನು ಹಿಂದೆ ಪಡೆಯದೆ ಇದ್ದರೆ ಕೊಪ್ಪಳ ಚಲೊ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ನಡುವೆ, ಇತ್ತೀಚೆಗೆ ಗೃಹ ಸಚಿವರ ಮನೆಗೆ ಎಬಿವಿಬಿ ಕಾರ್ಯ ಕರ್ತರು ಮುತ್ತಿಗೆ ಹಾಕಿದಾಗ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸದೆ, ಬಂಧಿದೆ ಬಿಟ್ಟು ಕಳುಹಿಸಲಾಗಿದೆ. ಅವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ. ಆದರೆ, ಕ್ಯಾಂಪಸ್‌ ಪ್ರಂಟ್ ಆಫ್ ವಿದ್ಯಾರ್ಥಿಗಳ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ಕ್ಯಾಂಪಸ್‌ ಫ್ರಂಟ್‌ ಆಫ್ ಇಂಡಿಯಾ ವಿದ್ಯಾರ್ಥಿಗಳನ್ನು ಬಂಧಿಸಿ ಹಿಂಸಿಸಲಾಗುತ್ತಿದೆ. ಇದು ಖಂಡನೀಯ. ನಾವು ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆ ಹೊಗುತ್ತೇವೆ ಎಂಧು ಸರ್ಫ್ ರಾಜ್ ಹೇಳಿದ್ದಾರೆ.

ಪೊಲೀಸರು ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸರ್ಫರಾಜ್‌ ಹೇಳಿದ್ದಾರೆ.

Exit mobile version