Site icon Vistara News

ಕುರಿದೊಡ್ಡಿಗೆ ದುಷ್ಕರ್ಮಿಗಳಿಂದ ಬೆಂಕಿ: ಹೊತ್ತಿ ಉರಿದ ಶೆಡ್!

ಚಾಮರಾಜನಗರ: ಇಲ್ಲಿನ ಕೋಡಿಉಗನೆ ಗ್ರಾಮದಲ್ಲಿ ರಾತ್ರಿ 1.30ರ ಸುಮಾರಿಗೆ ದುಷ್ಕರ್ಮಿಗಳು ಕುರಿದೊಡ್ಡಿಗೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು 35ಕ್ಕೂ ಹೆಚ್ಚು ಕುರಿ ಮರಿಗಳು ಸುಟ್ಟು ಕರಕಲಾಗಿವೆ.

ರಂಗಮ್ಮ ಎಂಬ ವೃದ್ಧೆಯೊಬ್ಬರಿಗೆ ಸೇರಿದ ಕುರಿಗಳಾಗಿದ್ದು, ಅಜ್ಜಿ ರಂಗಮ್ಮ ಇದರಿಂದಲೇ ಜೀವನ ಸಾಗಿಸುತ್ತಿದ್ದರು. ಬೆಂದು ಕರಕಲಾಗಿರುವ ಕುರಿಗಳನ್ನು ನೋಡಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಮಹದೇವಸ್ವಾಮಿ ಎಂಬುವರಿಗೆ ಸೇರಿರುವ 30ಕ್ಕೂ ಹೆಚ್ಚು ಕುರಿಗಳು ಭಸ್ಮ ಆಗಿವೆ.

ಬೆಂಕಿ ಕಂಡ ತಕ್ಷಣ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಅವರು ಬಂದು ಬೆಂಕಿ ಆರಿಸುವಷ್ಟರಲ್ಲಿ ಕುರಿಗಳು ಸುಟ್ಟು ಕರಕಲಾಗಿದ್ದಲ್ಲದೆ, ಅಪಾರ ಪ್ರಮಾಣದಲ್ಲಿ ನಷ್ಟಗಳಾಗಿವೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದ್ ಭೇಟೆ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ| ಯಾದಗಿರಿಯಲ್ಲಿ ಪತ್ನಿಯ ಸಂಬಂಧಿಕರಿಗೆ ಬೆಂಕಿ ಹಚ್ಚಿದ ಪ್ರಕರಣ, ಮತ್ತಿಬ್ಬರ ಮರಣ

Exit mobile version