Site icon Vistara News

Love Story: ಅಂತರ್ಜಾತಿ ವಿವಾಹಕ್ಕೆ ಪೋಷಕರ ಅಡ್ಡಿ, ಪೊಲೀಸರ ಎದುರೇ ಹೈಡ್ರಾಮಾ, ಪ್ರಿಯತಮನ ಜತೆ ಹೋದ ಯುವತಿ

inter caste marriage

ಚಿಕ್ಕಬಳ್ಳಾಪುರ‌: ಅಂತರ್ಜಾತಿ ಪ್ರೇಮ ಪ್ರಕರಣಕ್ಕೆ (inter caste marriage) ಪೋಷಕರು ಅಡ್ಡಿಪಡಿಸಿದ ಹಾಗೂ ರೊಚ್ಚಿಗೆದ್ದ ಯುವತಿ ಪ್ರಿಯತಮನ ಜತೆಗೆ ಹೋದ ಘಟನೆ ಗುಡಿಬಂಡೆ ಪೊಲೀಸ್‌ ಠಾಣೆ ಎದುರು ನಡೆದಿದೆ.

ಪ್ರೇಮಿಗಳ ಅಂತರ್ಜಾತಿ ಪ್ರೀತಿಗೆ ಪೋಷಕರು ವಿರೋಧ ತೋರಿದ್ದು, ಗುಡಿಬಂಡೆ ಪೊಲೀಸ್ ಠಾಣೆ ಎದುರು ಯುವತಿಯ ಸಂಬಂಧಿಕರು ಈ ಸಂಬಂಧ ಗಲಾಟೆ ಎಬ್ಬಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾಮಶೆಟ್ಟಿಹಳ್ಳಿಯ ಕೆ.ಎಂ ಮಧುಸೂದನ್ ಹಾಗೂ ಗುಡಿಬಂಡೆ ತಾಲೂಕಿನ ಜಂಬಿಗೇಮರದ ಹಳ್ಳಿಯ ಜೆ.ಎಸ್ ಭಾನುಶ್ರೀ ಪ್ರೀತಿಸಿದ್ದರು. ಚಿಕ್ಕಬಳ್ಳಾಪುರ ನಗರದ ಮಹೇಶ್ವರಿ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವೇಳೆ ಇವರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಅನ್ಯ ಜಾತಿಯ ಯುವಕನ ಜೊತೆಗಿನ ಪ್ರೀತಿ ಹಾಗೂ ಮದುವೆಗೆ ಯುವತಿಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆ ಎದುರೇ ಕೂಗಾಟ ರಂಪಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಪೊಲೀಸರ ಜತೆ ವಾಗ್ವಾದಕ್ಕಿಳಿದು ಯುವತಿಯನ್ನು ತಮ್ಮೊಂದಿಗೆ ಕಳಿಸುವಂತೆ ಒತ್ತಾಯಿಸಿದರು.

ಪೊಲೀಸರು ಈ ವೇಳೆ ಯುವತಿಯ ಹೇಳಿಕೆಯನ್ನು ಪಡೆದಿದ್ದು, ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ಹೇಳಿಕೆ‌ ನೀಡಿದ ಯುವತಿ‌ಯ ಮಾತಿಗೆ ಅನುಗುಣವಾಗಿ ಪೋಷಕರ ವಿರೋಧದ ನಡುವೆಯೂ ಪ್ರೇಮಿಗಳಿಗೆ ರಕ್ಷಣೆ ನೀಡಿ ಕಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Love Story: ಕೃಷ್ಣನ ಅರಸಿ ವೃಂದಾವನಕ್ಕೆ ಬಂದು ‘ಗೋಪಾಲಕ’ನ ಮದುವೆಯಾದ ರಷ್ಯಾ ಮಹಿಳೆ

Exit mobile version