Site icon Vistara News

ಹೋಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಬೆಳೆಯಲು ಸಾಕಷ್ಟು ಅವಕಾಶವಿದೆ ಎಂದ ಸಿಎಂ ಬೊಮ್ಮಾಯಿ

ಹೋಟೆಲ್ ಉದ್ಯಮಕ್ಕೆ

ಬೆಂಗಳೂರು: ಹೊಟೆಲ್ ಉದ್ಯಮ ಅತ್ಯಂತ ಮಹತ್ವದ್ದಾಗಿದ್ದು, ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಶಗಳಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೃಹತ್ ಬೆಂಗಳೂರು ಹೋಟೆಲುಗಳ ಸಂಘದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘2022 ಫುಡ್ ಅವಾರ್ಡ್ಸ್‌ʼ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಮತ್ತು ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬಂದ್‌ಗೆ ಕರೆಕೊಟ್ಟ ಸಮಯದಲ್ಲೂ ಹೋಟೆಲ್‌ಗಳು ಬಂದ್ ಆಗದಿದ್ದರೆ ಆ ಬಂದ್ ಯಶಸ್ವಿಯಾಗುವುದಿಲ್ಲ‌. ಎಲ್ಲರೂ ಕೆಲಸದಲ್ಲಿದ್ದಾಗ ನೀವು ಬಂದ್ ಮಾಡಿದರೂ ಅದು ನಿಜವಾದ ಬಂದ್ ಆಗುತ್ತದೆ ಎಂದು ಅವರು, ನಮ್ಮ ಮನೆಯವರು ಮನೆಯಲ್ಲಿ ಇಲ್ಲದಿರುವಾಗ ನೀವೇ ನಮ್ಮ ಮನೆಯವರಾಗುತ್ತೀರಿ‌. ರಾತ್ರಿ ಎಷ್ಟೇ ತಡವಾದರೂ ಹೋಟೆಲ್‌ನವರು ನಮಗೆ ನಗುನಗುತಾ ಸೇವೆ ಒದಗಿಸುತ್ತಾರೆ. ಕೊರೊನಾ ಸಂದರ್ಭದಲ್ಲಿ ನೀವು ಸಾಕಷ್ಟು ಸಮಸ್ಯೆ ಎದುರಿಸಿದ್ದೀರಿ. ಸರ್ಕಾರಕ್ಕೆ ಸಹಕಾರವನ್ನೂ ನೀಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ತಿಳಿಸಿದರು.

ಇದನ್ನೂ ಓದಿ | Nitish Kumar | ಲೋಕಸಭೆ ಚುನಾವಣೆಯಲ್ಲಿ ಉ.ಪ್ರದಿಂದ ಸ್ಪರ್ಧೆ? ನಿತೀಶ್‌ ಕುಮಾರ್‌ ಕೊಟ್ಟ ಸ್ಪಷ್ಟನೆ ಏನು?

ಹೋಟೆಲ್ ಉದ್ಯಮ ಯಶಸ್ವಿಯಾಬೇಕು ಎಂದರೆ ಅದರ ಸೇವೆ ಬಹಳ ಮುಖ್ಯ. ದೊಡ್ಡ ಹೋಟೆಲ್ ಇಟ್ಟುಕೊಂಡು ಸರಿಯಾದ ಸೇವೆ ಇಲ್ಲವೆಂದರೆ ಪ್ರಯೋಜನವಿಲ್ಲ. ಆದ್ದರಿಂದ ಹೋಟೆಲ್ ಉದ್ಯಮಕ್ಕೆ ಉತ್ತಮ ತರಬೇತಿ ಪಡೆದಿರುವ ಕೆಲಸಗಾರರು ಬೇಕು. ಈ ನಿಟ್ಟಿನಲ್ಲಿ ಹೋಟೆಲ್ ಸೇವೆಗಳಿಗೆ ಕಾರ್ಮಿಕ ಇಲಾಖೆಯಿಂದ ಫಿನಿಷಿಂಗ್ ಸ್ಕೂಲ್ ತೆಗೆದರೆ ರಾಜ್ಯಕ್ಕೆ ಒಳ್ಳೆಯ ಹೆಸರು ಬರುತ್ತದೆ, ಜತೆಗೆ ಪ್ರವಾಸೋದ್ಯಮಕ್ಕೆ ಉತ್ತಮ ಬೆಂಬಲ ಸಿಗುತ್ತದೆ‌ ಎಂದು ತಿಳಿಸಿದರು.

ಹೋಟೆಲ್ ಉದ್ಯಮಕ್ಕೆ ಪ್ರವಾಸೋದ್ಯಮದಲ್ಲಿ ಸಾಕಷ್ಟು ಅವಕಾಶ ಇದೆ. ಬೇರೆ ರಾಜ್ಯಗಳಲ್ಲಿ ಪ್ರವಾಸೊದ್ಯಮದಲ್ಲಿ ಹೋಟೆಲ್‌ಗಳು ತೊಡಗಿಸಿಕೊಂಡಷ್ಟು ಶೇ.50 ರಷ್ಟು ಕೂಡ ನಮ್ಮ ರಾಜ್ಯದಲ್ಲಿ ತೊಡಗಿಕೊಂಡಿಲ್ಲ. ನಿಮಗೆ ಏನು ಸಹಕಾರ ಬೇಕೋ ನಾನು ಕೊಡಲು ಸಿದ್ಧನಿದ್ದೇನೆ. ಪ್ರವಾಸೋದ್ಯಮಕ್ಕೆ ನೀವು ಎಂಡ್ ಟು ಎಂಡ್ ಅಪ್ರೋಚ್ ನೀಡಬೇಕು. ಇದಕ್ಕೆ ಬೇಕಿರುವ ಸಿಂಗಲ್ ವಿಂಡೋ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನೀವು ಪ್ರವಾಸೋದ್ಯಮ ಇಲಾಖೆಯೊಂದಿಗೆ ನೋಂದಣಿ ಮಾಡಿಕೊಂಡರೆ ಹೋಟೆಲ್ ಉದ್ಯಮ ಎಂದು ಪರಿಗಣಿಸುತ್ತೇನೆ ಎಂದು ಹೋಟೆಲ್ ಮಾಲೀಕರ ಬೇಡಿಕೆಗೆ ಉತ್ತರ ನೀಡಿದರು. 24×7 ಆಹಾರ ಸರಬರಾಜಿಗೆ ಅವಕಾಶ ನೀಡುವ ಬಗ್ಗೆ ತಕ್ಷಣ ಹೇಳಲು ಆಗುವುದಿಲ್ಲ‌. ಅದು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಇದನ್ನೂ ಆದಷ್ಟು ಪರಿಗಣಿಸಲಾಗುವುದು ಎಂದು ಹೇಳಿದರು.

ಹೋಟೆಲ್ ಉದ್ಯಮ ಸ್ಕೇಲ್ ಅಪ್ ಆಗಬೇಕು. ನಿಮಗೆ ಬ್ಯಾಂಕ್ ಅವರು ಸುಲಭವಾಗಿ ಸಾಲ‌ ನೀಡುತ್ತಾರೆ. ಕಠಿಣ ಶ್ರಮದಿಂದ ಮಾತ್ರ ಉದ್ಯಮ ಬೆಳೆಸಲು ಸಾಧ್ಯ. ಹೋಟೆಲ್ ಉದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ನೀವು ನಿಮಗಾಗಿ ಪ್ರಾಮಾಣಿಕರಾಗಬೇಕು. ಅಲ್ಲದೇ ರಾಜ್ಯದಲ್ಲಿ ನಿಮಗೆ ವ್ಯವಹಾರ ಸ್ನೇಹಿ ಸರ್ಕಾರ ಇದೆ. ಇದನ್ನು ಬಳಸಿಕೊಂಡು ಅತ್ಯಂತ ಯಶಸ್ವಿಯಾಗಿ ಬೆಳೆಯಬೇಕು. ಆ ಮೂಲಕ ರಾಜ್ಯವೂ ಅಭಿವೃದ್ಧಿಯಾಗಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶಿವರಾಮ್ ಹೆಬ್ಬಾರ್, ಬೆಂಗಳೂರು ಹೊಟೆಲ್ ಸಂಘದ ಅಧ್ಯಕ್ಷ ಪಿಸಿ ರಾವ್ ಸೇರಿದಂತೆ ಹಲವರು ಉಪಸ್ಥಿತರಿಸ್ದರು.

ಇದನ್ನೂ ಓದಿ | Charity Begins at Home | ದಾನವೇ ಧರ್ಮದ ಮೂಲ, ವರ್ಷದಲ್ಲಿ ಭಾರತೀಯರು ಮಾಡಿದ ದಾನ ಎಷ್ಟು ಸಾವಿರ ಕೋಟಿ ರೂ.?

Exit mobile version