Site icon Vistara News

Snake Bite: ಹಾವು ಕಡಿತಕ್ಕೆ ಯುವಕ ಬಲಿ

snake bite death hassan

ಹಾಸನ: ಹಾವು ಕಡಿತಕ್ಕೆ ಯುವಕನೊಬ್ಬ (snake bite) ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ‌ ದೇವರಗುಡ್ಡೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅಭಿಲಾಷ್ (27) ಸಾವನ್ನಪ್ಪಿದ ಯುವಕ. ನಿನ್ನೆ ರಾತ್ರಿ ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಹಾವು ಕಡಿತ ಸಂಭವಿಸಿದೆ. ಕೂಡಲೇ ಹೊಳೆನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಫಲಕಾರಿಯಾಗಲಿಲ್ಲ.
ಅಭಿಲಾಷ್‌ ಹೈನುಗಾರಿಕೆ ಹಾಗೂ ತೋಟ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ಗೆ ಕಾರು ಡಿಕ್ಕಿ, ಮಹಿಳೆ ಸಾವು

ಬೆಂಗಳೂರು: ಬೈಕ್‌ಗೆ ಕಾರು ಡಿಕ್ಕಿಯಾಗಿ (road accident) ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಪೀಣ್ಯ ಮೇಲ್ಸೇತುವೆ ಮೇಲೆ ದುರ್ಘಟನೆ ನಡೆದಿದೆ.

ಅಶ್ವಿನಿ ಮೃತಪಟ್ಟ ಮಹಿಳೆ. ಮಗನೊಂದಿಗೆ ನೆಲಮಂಗಲದ ಕಡೆ ಬೈಕ್‌ನಲ್ಲಿ ಪ್ಲೈಓವರ್ ಮೇಲೆ ಅವರು ಹೋಗುತ್ತಿದ್ದಾಗ ಹಿಂದಿನಿಂ ಬಂದ ಕಾರು ಡಿಕ್ಕಿಯಾಗಿದೆ. ಮಹಿಳೆ ಮೃತಪಟ್ಟು, ಮಗನಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಮಾಡಿದ ಕಾರು ಚಾಲಕ ಹಾಗೂ ಕಾರ್ ಅನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಗೆ ಮರ ಬಿದ್ದು ಇಬ್ಬರಿಗೆ ಗಾಯ

ಮಂಗಳೂರು: ಭಾರಿ ಮಳೆಗೆ ಮನೆ ಮೇಲೆ ಮರ ಉರುಳಿದ್ದು, ಮನೆಯಲ್ಲಿದ್ದ ತಾಯಿ ಹಾಗೂ ಮಗುವಿಗೆ ಗಾಯಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಹನುಮಾನ್ ನಗರದ ಬಳಿ ಘಟನೆ ನಡೆದಿದೆ.

ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಗಾಧರ್ ಎಂಬವರಿಗೆ ಸೇರಿದ ಮನೆ ಮೇಲೆ ಮರ ಬಿದ್ದಿದೆ. ಮರ ಬಿದ್ದ ಕಾರಣ ಮನೆಗೆ ಬಹುತೇಕ ಹಾನಿಯಾಗಿದೆ. ಗಂಗಾಧರ್ ಅವರ ತಾಯಿ ಮತ್ತು ಮಗುವಿಗೆ ಗಾಯಗಳಾಗಿವೆ. ಕಡಬದ ಶೌರ್ಯ ತಂಡ ಮನೆಯವರ ರಕ್ಷಣೆ ಮಾಡಿದೆ.

ಇದನ್ನೂ ಓದಿ: Train Accident : ಆಂಧ್ರದ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Exit mobile version