Site icon Vistara News

VHP Yatre : ಅಧರ್ಮಿಗಳನ್ನು ಕೊಲ್ಲಿ ಅಂದ ಶ್ರೀಕೃಷ್ಣನ ಮಾತು ಜಿಹಾದಿಗಳಿಗೆ ನೆನಪಿರಲಿ ಎಂದ ಪಂಪ್‌ವೆಲ್‌

Sharan Pumpwell in VHP rathayatre

ಮಂಗಳೂರು: ʻʻಅಧರ್ಮ ಮಾಡಿದವರನ್ನ ಕೊಂದು ಬಿಡು ಅಂತ ಶ್ರೀಕೃಷ್ಣನೇ ಹೇಳಿದ್ದಾನೆ. ಶ್ರೀಕೃಷ್ಣನ ಈ ನೀತಿಯೇ ಇಡೀ ಜಗತ್ತನ್ನು ಬದುಕಿಸಲಿದೆ. ಇಸ್ಲಾಂ ಜಿಹಾದಿಗಳು ಕೃಷ್ಣನ ನೀತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕುʼʼ- ಹೀಗೆಂದು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ ವಿಶ್ವಹಿಂದು ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ (Sharan Pumpwell).

ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್‌ನ ಶೌರ್ಯ ಜಾಗರಣ ರಥಯಾತ್ರೆಯ (VHP Yatre) ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಇದು, ಜಿಹಾದಿ ನಾಯಿಗಳೇ ಇದು ಔರಂಗಜೇಬಲ ಕಾಲವಲ್ಲ, ನರೇಂದ್ರನ ಕಾಲ ಎಂದು ಎಚ್ಚರಿಕೆ ನೀಡಿದರು.

ʻʻಇವತ್ತು ನಮ್ಮ ಹೋರಾಟವನ್ನು ಕೆಲವರು ಪ್ರಶ್ನೆ ಮಾಡ್ತಾರೆ. ಶಾಂತಿ ನಿರ್ಮಾಣ ಆಗಬೇಕು ಅಂತ ಈ ಸರ್ಕಾರ ಹೇಳುತ್ತದೆ. ಆದರೆ ಶಿವಮೊಗ್ಗದಲ್ಲಿ ಪೈಗಂಬರರ ಜನ್ಮದಿನಾಚರಣೆ ಹೆಸರಲ್ಲಿ ಕಲ್ಲು ತೂರಲಾಗಿದೆ. ನಮ್ಮ‌‌ ಕೃಷ್ಣಾಷ್ಟಮಿ, ಚೌತಿಗೆ ಇಂಥ ಘಟನೆ ನಡೆದ ಉದಾಹರಣೆ ಇದ್ಯಾ?ʼʼ ಎಂದು ಅವರು ಪ್ರಶ್ನಿಸಿದರು.

ಮಂಗಳೂರಲ್ಲಿ ಆಗಿದ್ದರೆ ದಂಗೆಕೋರರ ಮೈ ಹುಡಿ ಆಗುತ್ತಿತ್ತು!

ʻʻಶಿವಮೊಗ್ಗದಲ್ಲಿ ನಡೆದ ಘಟನೆ ಏನಾದರೂ ಮಂಗಳೂರಿನಲ್ಲಿ ನಡೆದಿದ್ದರೆ ನೂರು ದಂಗೆಕೋರರ ಮೈ ಹುಡಿಯಾಗ್ತಿತ್ತು. ಪ್ರಶಾಂತ್ ಪೂಜಾರಿ ಹತ್ಯೆಯಾದಾಗ ಯಾರೋ ಒಬ್ಬ ಯುವಕ ಜೈಲಲ್ಲಿ ಕೂತು ಚಮಚವನ್ನು ನೆಲಕ್ಕೆ ಬಡಿಯುತ್ತಿದ್ದ. ಬಳಿಕ ನಮ್ಮ ಕಾರ್ಯಕರ್ತನ ಬಲಿದಾನಕ್ಕೆ ಪ್ರತೀಕಾರ ಆಗಿತ್ತು. ಆ‌ ಬಲಿದಾನಕ್ಕೆ ಉತ್ತರ ಕೊಡೋ ಕೆಲಸ ಆ ಹಿಂದೂ ಯುವಕ ಮಾಡಿದ್ದ. ಮುಂದೆಯೂ ಅಂಥದ್ದೇ ಉತ್ತರ ದ.ಕ ಮತ್ತು ಉಡುಪಿ ಜಿಲ್ಲೆಯ ಯುವಕರು ಕೊಡ್ತಾರೆʼʼ ಎಂದು ಅವರು ಎಚ್ಚರಿಸಿದರು.

ಸ್ಟಾಲಿನ್‌ ಮಂಗಳೂರಿನಲ್ಲಿ ಆ ಮಾತು ಹೇಳುತ್ತಿದ್ದರೆ ಹಿಂದೆ ಹೋಗುತ್ತಿರಲಿಲ್ಲ!

ʻʻಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮ ನಾಶ ಆಗಬೇಕು ಅಂತಾ ತಮಿಳುನಾಡಿನಲ್ಲಿ ಹೇಳಿದ್ದ.. ಒಂದು ವೇಳೆ ಮಂಗಳೂರಿನಲ್ಲಿ ಹೇಳಿದರೆ ಆತ ವಾಪಸ್ ಹೋಗುತ್ತಿರಲಿಲ್ಲʼʼ ಎಂದು ಸಮಾವೇಶದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ʻʻನಾವು ಶಿವಾಜಿಯ ಫೋಟೊ ಹಾಕುತ್ತೇವೆ ಅಂತ ಅವರು ಟಿಪ್ಪುವಿನ ಫೋಟೊ ಹಾಕುತ್ತಾರೆʼʼ ಎಂದು ಸೂಲಿಬೆಲೆ ಹೇಳಿದ್ದಾರೆ.

ಇನ್ನು ಅವನೊಬ್ಬ ಬಾಕಿ ಇದ್ದಾನೆ ಯೋಗಿ ಆದಿತ್ಯನಾಥ್‌

ʻʻʻಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಶಾಂತಿಯ ಮಾತು ಹೇಳಿದರು. ಈ ಮೂಲಕ ಮುಸ್ಲಿಮರ ತುಷ್ಟೀಕರಣ ಮಾಡಿದರು. ಆದರೆ ಮುಸ್ಲಿಮರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಅಟಲ್ ಬಿಹಾರಿ ವಾಜಪೇಯಿ ಕೂಡಾ ಶೌರ್ಯ ಮರೆತು ಪಾಕ್ ಜೊತೆ ಸ್ನೇಹದ ಹಸ್ತ ಚಾಚಿದರು. ಆದರೆ, ಅವರೂ ಕಾರ್ಗಿಲ್ ಯುದ್ಧವನ್ನೂ ಮಾಡಿದರು. ಆದರೆ ಈಗ ಬಂದಿರುವ ನರೇಂದ್ರ ಮೋದಿ ಪಾಕ್ ಗೆ ಪಾಠ ಕಲಿಸಿದರು. ನಮ್ಮ ತಂಟೆಗೆ ಬಂದ್ರೆ ನುಗ್ಗಿ ಹೊಡೆಯುವ ಎಚ್ಚರಿಕೆ ನೀಡಿದರು. ಭಾರತದ ಜೋಳಿಗೆಯಲ್ಲಿ ಇನ್ನೊಬ್ಬ ಬಾಕಿ ಇದ್ದಾನೆ. ದೇಶದೊಳಗೆ ತಂಟೆ ಮಾಡಿದ್ರೆ ಬುಲ್ಡೋಜರ್ ನುಗ್ಗಿಸೋದಾಗಿ ಹೇಳಿ ಶೌರ್ಯ ಮೆರೆದಿದ್ದಾನೆʼʼ ಎಂದು ಯೋಗಿ ಆದಿತ್ಯನಾಥ್‌ ಅವರನ್ನು ನೆನಪಿಸಿಕೊಂಡರು.

Chakravarty sulibele

ಇದನ್ನೂ ಓದಿ : Chakravarty sulibele : ಇನ್ನು ಮುಂದೆ ಮೋದಿ ಹೆಸರಲ್ಲಿ ಮತ ಕೇಳಲ್ಲ ಎಂದ ಸೂಲಿಬೆಲೆ, ಯಾಕೆ?

ʻʻಈ ನಾಡಿನಲ್ಲಿ ಮಹಿಷಿಯ ದಸರಾ ಮೂಲಕ ಸಂಸ್ಕೃತಿಯನ್ನು ಒಡೆಯುವ ಕೆಲಸವಾಗುತ್ತಿದೆ. ಕ್ರೈಸ್ತರು ನಿರಂತರ ಮತಾಂತರ ಮಾಡುವ ಮೂಲಕ ಒಡೆದರು. ನಮ್ಮ ಮಂದಿರವನ್ನು ಕ್ರೈಸ್ತರು ಕಾಪಿ ಮಾಡಿದರು. ಚರ್ಚ್ ನಲ್ಲಿ ಉರುಳುಸೇವೆ, ರಥಯಾತ್ರೆ, ಗರುಡಕಂಬ ಎಲ್ಲವೂ ಇದೆʼʼ ಎಂದು ಹೇಳಿದರು.

ಮಂಗಳೂರಿನಲ್ಲಿ ಮುಸ್ಲಿಮರು ಡ್ರಗ್ಸ್‌ ನೀಡುತ್ತಿದ್ದಾರೆ

ಮಂಗಳೂರಿನಲ್ಲಿ ಮುಸ್ಲಿಮ್‌ ಯುವಕರು ಹಿಂದೂ ಯುವಜನರಿಗೆ ಡ್ರಗ್ಸ್‌ ನೀಡಿ ಅವರನ್ನು ತಲೆ ಎತ್ತದಂತೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಕೂಡಾ ಚಕ್ರವರ್ತಿ ಆರೋಪಿಸಿದರು.

Exit mobile version