Site icon Vistara News

ಮದುವೆಯಾಗಿ ಮೂರು ತಿಂಗಳಿಗೆ ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಆರೋಪ

ವರದಕ್ಷಿಣೆ ಕಿರುಕುಳ

ದಾವಣಗೆರೆ : ಮದುವೆಯಾಗಿ ಮೂರು ತಿಂಗಳಿಗೆ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಮೀಯಾಪುರ ತಾಂಡಾದಲ್ಲಿ ಶನಿವಾರ (ಆ. 13) ಗೃಹಿಣಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರೂಪಾಬಾಯಿ(22)ವಿಷ ಸೇವನೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಗೃಹಿಣಿಯಾಗಿದ್ದಾರೆ. ಮೂರು ತಿಂಗಳ ಹಿಂದೆ ಗಂಗಾಧರ್(32) ಜತೆ ರೂಪಾಬಾಯಿ ಮದುವೆಯಾಗಿದ್ದರು. ವರದಕ್ಷಿಣೆ ನೀಡಿ ಅದ್ಧೂರಿಯಾಗಿ ರೂಪಾಬಾಯಿ ಪೋಷಕರು ಮದುವೆ ಮಾಡಿಕೊಟ್ಟಿದ್ದರು.

ಇದನ್ನೂ ಓದಿ | Dowry Case | ಕೆಜಿಗಟ್ಟಲೇ ಚಿನ್ನಾಭರಣ, ಕೋಟಿಗಟ್ಟಲೇ ವರದಕ್ಷಿಣೆ ಕೊಟ್ಟರೂ ನಿಲ್ಲದ ಧನದಾಹ, ವಿಕೃತಿ!

ʻಮೂರು ಗ್ರಾಂ ಚಿನ್ನ ಕಡಿಮೆ ನೀಡಿದ್ದಾರೆ ಎಂದು ನಿತ್ಯ ಕಿರುಕುಳ ನೀಡುತ್ತಿದ್ದರು. ಒಂದೂವರೆ ತಿಂಗಳ ಗರ್ಭಿಣಿ ಯಾಗಿದ್ದರೂ ಗಂಡನ ಮನೆಯವರಿಂದ ನಿತ್ಯ‌ ಕಿರುಕುಳ ಇತ್ತು. ಹಲ್ಲೆ ಮಾಡಿ ವಿಷ ಕುಡಿಸಿ ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆʼ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಗೆ ದಾಖಲು ಮಾಡಿ ಎರಡು ದಿನದ ನಂತರ ರೂಪಾ ಪೋಷಕರಿಗೆ ಗಂಗಾಧರ್ ವಿಷಯ ತಿಳಿಸಿದ್ದ ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರೂಪಾಬಾಯಿ ಮೃತಪಟ್ಟಿದ್ದಾರೆ. ಇದೀಗ ರೂಪಾಬಾಯಿ ಗಂಡನ ಮನೆಯವರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | ವರದಕ್ಷಿಣೆ ಕಿರುಕುಳ: ಒಂಬತ್ತು ತಿಂಗಳ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ

Exit mobile version