Site icon Vistara News

Dharma dangal : ರಾಯಚೂರಿಗೂ ಕಾಲಿಟ್ಟ ವ್ಯಾಪಾರ ದಂಗಲ್‌; ಗುರುಗುಂಟ ಅಮರೇಶ್ವರ ಜಾತ್ರೆಗೆ ಅನ್ಯ ಧರ್ಮದ ವ್ಯಾಪಾರಿಗಳಿಗೆ ಪ್ರವೇಶವಿಲ್ಲ?

Gurugunta amareshwara temple

#image_title

ರಾಯಚೂರು: ಕರಾವಳಿ, ಮಲೆನಾಡಿನಲ್ಲಿ ವ್ಯಾಪಕವಾಗಿರುವ ವ್ಯಾಪಾರ ದಂಗಲ್‌ (Dharma dangal) ಈಗ ರಾಯಚೂರು ಜಿಲ್ಲೆಗೂ ಕಾಲಿಟ್ಟಿದೆ. ರಾಯಚೂರಿನ ಲಿಂಗಸುಗೂರು ತಾಲೂಕಿನ ಇತಿಹಾಸ ಪ್ರಸಿದ್ಧ ಗುರುಗುಂಟ ಶ್ರೀ ಅಮರೇಶ್ವರ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದು ಜಾಗರಣ ವೇದಿಕೆ ವತಿಯಿಂದ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಸುಮಾರು ೩೦೦ಕ್ಕಿಂತಲೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ ಈಗ ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಇಲ್ಲಿ ಇದೇ ಮಾರ್ಚ್ ೫ರಂದು ಜಾತ್ರೆ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿಯೇ ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತದೆ.

ಈ ಜಾತ್ರೆಯಲ್ಲಿ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ‌ನಿರ್ಬಂಧ ವಿಧಿಸಬೇಕು ಎಂದು ಜಾಗರಣ ವೇದಿಕೆ ಮನವಿ ಮಾಡಿದೆ. ದೇವಸ್ಥಾನ ಸಮೀಪದ ‌ಜಮೀನು, ಕಟ್ಟಡ, ನಿವೇಶನವನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡಬಾರದು ಎಂದು ಮನವಿ ಮಾಡಲಾಗಿದೆ.

ಅರ್ಚನೆ, ಪೂಜಾ ಸಾಮಗ್ರಿ, ಕಾಯಿ, ಕರ್ಪೂರ, ಹೋಟೆಲ್‌ಗಳ ವ್ಯಾಪಾರವನ್ನು ಹಿಂದೂ ಧರ್ಮದವರಿಗೆ ಮಾತ್ರ ಟೆಂಡರ್ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದಾರೆ.

ಇದನ್ನೂ ಓದಿ : Dharma dangal : ಗುಬ್ಬಿ ದೇವಾಲಯಕ್ಕೂ ಹರಡಿದ ವ್ಯಾಪಾರ ದಂಗಲ್:‌ ಜಾತ್ರೆಯಲ್ಲಿ ಅನ್ಯ ಧರ್ಮೀಯರ ಅಂಗಡಿಗೆ ವಿರೋಧ

Exit mobile version