Site icon Vistara News

Domestic violence | ಗೃಹಿಣಿಯ ಶವ ಕೆರೆಯಲ್ಲಿ ಪತ್ತೆ: ಗಂಡನ ಮನೆಯವರ ಮೇಲೆ ಕೊಲೆ ಆರೋಪ

Two persons drowned in ganga river

ಮೈಸೂರು: ತಿ.ನರಸೀಪುರ ತಾಲೂಕಿನ ಮೇದನಿ ಗ್ರಾಮದಲ್ಲಿ ಗೃಹಿಣಿಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಗಂಡನ ಮನೆಯವರು ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ (Domestic violence) ಎಂದು ಮಹಿಳೆಯ ತಾಯಿ ಮನೆಯವರು ದೂರಿದ್ದಾರೆ.

ಗ್ರಾಮದ ಭಾಗ್ಯ ಎಂಬ ಮಹಿಳೆಯೇ ಮೃತಪಟ್ಟವರು. ಪತಿ ಶಂಕರ್ ಹಾಗೂ ಮನೆಯವರು ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಭಾಗ್ಯ ಅವರ ಪೋಷಕರು ತಲಕಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಂಕರ್ ಮತ್ತು ಭಾಗ್ಯ ಅವರ ಮದುವೆ 15 ವರ್ಷದ ಹಿಂದೆ ನಡೆದಿತ್ತು. ಮದುವೆಯಾದ ದಿನದಿಂದಲೇ ಭಾಗ್ಯಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದು ಮನೆಯವರ ಆರೋಪ. ಈ ಬಗ್ಗೆ ಸಾಕಷ್ಟು ಬಾರಿ ರಾಜಿ ಪಂಚಾಯತಿ ಮಾಡಲಾಗಿತ್ತು. ಆದರೂ ಆಕೆಗೆ ನೀಡುತ್ತಿದ್ದ ಕಿರುಕುಳವನ್ನು ನಿಲ್ಲಿಸಲಿಲ್ಲ ಎನ್ನುತ್ತಾರೆ ಅವರು.

ಪತಿ ಶಂಕರ್, ಅತ್ತೆ ಸಿದ್ದಮ್ಮ, ಅತ್ತಿಗೆ ನೀಲ, ಅತ್ತಿಗೆ ಗಂಡ ಸಿದ್ದಪ್ಪ ಸೇರಿ ಭಾಗ್ಯನನ್ನು ಕೊಲೆ ಮಾಡಿ ಕೆರೆಗೆ ಹಾಕಿದ್ದಾರೆ ಎನ್ನುವುದು ಅವರ ಆರೋಪ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ | Suicide death | ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ ಮರದಿಂದ ಬಿದ್ದು ಸಾವು!

Exit mobile version