Site icon Vistara News

Murder case | ಸುರಪುರದ ಕಾಚಾಪುರದಲ್ಲಿ ಜೋಡಿ ಕೊಲೆ; ಅನೈತಿಕ ಸಂಬಂಧದ ವಿರುದ್ಧ ಸಿಡಿದ ಪತಿರಾಯ

murder ಸುರಪುರ ಕೆಂಬಾವಿ ಜೋಡಿ ಕೊಲೆ

ಯಾದಗಿರಿ: ಸುರಪುರ ತಾಲೂಕಿನ ಕೆಂಬಾವಿಯಲ್ಲಿ ಕಾಚಾಪುರ ಗ್ರಾಮದಲ್ಲಿ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಜೋಡಿ ಕೊಲೆ (Murder case) ನಡೆದಿದೆ. ಪತ್ನಿಯು ಪರಪುರುಷನ ಜತೆಗೆ ನೋಡಬಾರದ ಸ್ಥಿತಿಯಲ್ಲಿ ನೋಡಿದ್ದರಿಂದ ಕ್ರೋಧಗೊಂಡ ಪತಿಯೇ ಕಲ್ಲು ಎತ್ತಿಹಾಕಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ.

30 ವರ್ಷದ ಬಸಮ್ಮ ಹಾಗೂ 36 ವರ್ಷದ ನಾಡಗೌಡ ಹತ್ಯೆಯಾದವರು. 35 ವರ್ಷದ ಮಲ್ಲಣ್ಣ ಕೊಲೆಗೈದ ಆರೋಪಿಯಾಗಿದ್ದಾನೆ. ಮೂವರೂ ಕಾಚಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಮಲ್ಲಣ್ಣನ ಪತ್ನಿ ಬಸಮ್ಮ ಜತೆ ನಾಡಗೌಡ ಅನೈತಿಕ ಸಂಬಂಧ ಹೊಂದಿದ್ದ. ಈ ಬಗ್ಗೆ ಪತಿಗೆ ಅನುಮಾನ ಉಂಟಾಗಿದ್ದು, ಆಗಾಗ ಜಗಳ ನಡೆದಿದೆ ಎನ್ನಲಾಗಿದೆ. ಆದರೂ ತಪ್ಪು ತಿದ್ದಿಕೊಳ್ಳದ ಬಸಮ್ಮ ಗುರುವಾರ (ಡಿ.೧) ನಾಡಗೌಡನ ಜತೆಗೆ ಆತನ ಜಮೀನಿನಲ್ಲಿ ಭೇಟಿಯಾಗಿದ್ದಾಳೆ.

ಈ ಸುದ್ದಿ ತಿಳಿದ ಮಲ್ಲಣ್ಣ ಸಹ ನಾಡಗೌಡನ ಜಮೀನಿಗೆ ಬಂದಿದ್ದಾನೆ. ಅಲ್ಲಿ ಹುಡುಕಾಟ ನಡೆಸಿದಾಗ ಬಸಮ್ಮ ಹಾಗೂ ನಾಡಗೌಡ ಒಟ್ಟಿಗೇ ಇರುವುದು ಕಂಡಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಲ್ಲಣ್ಣ ಗಲಾಟೆ ಮಾಡಿದ್ದಾನೆ. ಕೊನೆಗೆ ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ದಾಳಿ ನಡೆಸಿದ್ದಾನೆ. ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕೆಂಬಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Honey trap | ಫೇಸ್‌ಬುಕ್‌ ಚೆಲುವೆಗೆ ಮರುಳಾದ ಸೂಪರ್‌ವೈಸರ್‌; ಪೊಲೀಸರ ಅತಿಥಿಯಾದ ʼಅತಿರೇಕʼ ಸುಂದರಿ!

Exit mobile version