Site icon Vistara News

Drowned in water | ಕೆರೆಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ವಿದ್ಯಾರ್ಥಿ ದುರ್ಮರಣ; ಮುಗಿಲು ಮುಟ್ಟಿದ ಆಕ್ರಂದನ

ಹಾವೇರಿ: ಜಿಲ್ಲೆಯ ಹೊರವಲಯದ ದೇವಗಿರಿ ಗ್ರಾಮದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದಲ್ಲಿ ಇರುವ ಚೌಡಮ್ಮನ ಕೆರೆಯಲ್ಲಿ ಭಾನುವಾರ (ಜ.8) ಸ್ನಾನ ಮಾಡಲು ಹೋದ ವಿದ್ಯಾರ್ಥಿ ನೀರುಪಾಲಾದ ಘಟನೆ (Drowned in water) ನಡೆದಿತ್ತು. ತೀವ್ರ ಶೋಧದ ಬಳಿಕ ಸೋಮವಾರ ಮೃತದೇಹ ಪತ್ತೆ ಆಗಿದೆ.

ಮೃತ ನೋಮಾನ್‌ ಪಾಷಾ

ಹಾವೇರಿ ವೈದ್ಯಕೀಯ ಕಾಲೇಜಿನ ಐವರು ವಿದ್ಯಾರ್ಥಿಗಳು ಸ್ನಾನ ಮಾಡಲು ಕೆರೆಗೆ ತೆರಳಿದ್ದರು. ಈ ವೇಳೆ ಸ್ನಾನ ಮಾಡುತ್ತಿರುವಾಗ ಮೈಸೂರು ಮೂಲದ ನೋಮಾನ್ ಪಾಷಾ (18) ಎನ್ನುವ ವಿದ್ಯಾರ್ಥಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದ. ಈ ವೇಳೆ ಉಳಿದ ನಾಲ್ಕು ವಿದ್ಯಾರ್ಥಿಗಳು ನೋಮಾನ್‌ ಪಾಷಾನನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಾಕ್ಕಾಗಮಿಸಿದ ರಕ್ಷಣಾ ತಂಡದಿಂದ ಶೋಧಕಾರ್ಯ ನಡೆಸಿದರೂ ಭಾನುವಾರ ಮೃತದೇಹ ಸಿಕ್ಕಿರಲಿಲ್ಲ. ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವರ್ಷ ಹಾವೇರಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು, ಮೊದಲ ವರ್ಷದ ತರಗತಿ 15 ದಿನಗಳ ಹಿಂದಷ್ಟೇ ಶುರುವಾಗಿತ್ತು.

ಇದನ್ನೂ ಓದಿ | Leopard Attack | ಮಂಡ್ಯದಲ್ಲಿ ನಿಲ್ಲದ ಚಿರತೆ ಹಾವಳಿ; 6 ಮೇಕೆಗಳ ಕೊಂದು, 4 ಮೇಕೆಗಳನ್ನು ಹೊತ್ತೊಯ್ದ ಚಿರತೆಗಳು

Exit mobile version