Site icon Vistara News

Election Politics: ಕಾಂಗ್ರೆಸ್ ಬ್ಯಾನರ್‌ ಹರಿದ ಕಿಡಿಗೇಡಿಗಳು; ಕಾರ್ಯಕರ್ತರ ಆಕ್ರೋಶ

tearing the banner honnavar congress

#image_title

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯ ಸರ್ಕಲ್ ಬಳಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರು ಅಳವಡಿಸಿದ ಬ್ಯಾನರ್ ಹರಿದಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು (Congress workers) ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ಬೆಂಬಲಿಸಿ ಮುಂದಿನ ದಿನದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಣೆಯಾದ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ಪ್ರಚಾರದ ಬ್ಯಾನರ್ ಅನ್ನು ಕಾರ್ಯಕರ್ತರು ಇತ್ತೀಚೆಗೆ ಅಳವಡಿಸಿದ್ದರು. ಕಿಡಿಗೇಡಿಗಳು ಭಾನುವಾರ (ಮಾ.19) ರಾತ್ರಿ ಈ ಬ್ಯಾನರ್ ಅನ್ನು ಹರಿದಿದ್ದಾರೆ.

ಇದನ್ನೂ ಓದಿ: Tippu sultan : ಉರಿ ಗೌಡ, ನಂಜೇಗೌಡರು ಕಾಲ್ಪನಿಕ ಪಾತ್ರ ಅಂದವರಿಗೆ ಮಂಗಳಾರತಿ ಆಗಿದೆ ಎಂದ ಸಿ.ಟಿ ರವಿ

“ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ. ಈ ಕೃತ್ಯ ಹೀನವಾಗಿದ್ದು, ಯಾರು ಇದನ್ನು ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಶಾಂತಿ ಕದಡುವ ರಾಜಕೀಯ ಕೃತ್ಯ ಮಾಡುವಷ್ಟು ಯಾರೂ ಕೀಳುಮಟ್ಟಕ್ಕೆ ಇಳಿಯಬಾರದು. ಮುಂದಿನ ದಿನದಲ್ಲಿ ಸಾಕ್ಷಿ ಸಮೇತ ಈ ಕೃತ್ಯ ಮಾಡಿದವರ ಫೋಟೊ ಸಮೇತ ಬಹಿರಂಗಪಡಿಸುವ ಜತೆಗೆ ಪೊಲೀಸ್‌ ಇಲಾಖೆಗೂ ಮಾಹಿತಿ ನೀಡಲಾಗುವುದು” ಎಂದು ಕಾಂಗ್ರೆಸ್ ಮುಖಂಡ ವಿನೋದ ನಾಯ್ಕ ಎಚ್ಚರಿಸಿದ್ದಾರೆ.

Exit mobile version