Site icon Vistara News

Electricution death | ಶಿವಮೊಗ್ಗ ಮತ್ತು ಕೊಪ್ಪಳದಲ್ಲಿ ವಿದ್ಯುತ್‌ ಆಘಾತದಿಂದ ಇಬ್ಬರು ರೈತರು ಮೃತ್ಯುವಶ

ಶೇಷಗಿರಿ

ಶಿವಮೊಗ್ಗ/ಕೊಪ್ಪಳ: ವಿದ್ಯುತ್‌ ಆಘಾತದಿಂದ (Electricution death) ರಾಜ್ಯದಲ್ಲಿ ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಂಜವಳ್ಳಿ ಗ್ರಾಮದಲ್ಲಿ ಶೇಷಗಿರಿ (45) ಎಂಬವರು ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟಿದ್ದಾರೆ.

ಶೇಷಗಿರಿ ಅವರ ಪತ್ನಿ ಮುಂಜಾನೆ ತಮ್ಮ ನಿವಾಸದ ಎದುರು ಹೂವು ಕೀಳಲು ತೆರಳಿದ್ದರು. ಈ ವೇಳೆ ಪತ್ನಿಗೆ ವಿದ್ಯುತ್ ಸ್ಪರ್ಶಿಸಿ, ಕೂಗಿಕೊಂಡಿದ್ದಾರೆ. ಪತ್ನಿಯನ್ನು ರಕ್ಷಿಸಲು ಹೋದ ಪತಿ ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ ಈ ಹಿಂದೆಯೇ ತಂತಿ ಬೇಲಿ‌ ಮೇಲೆ ಬಿದ್ದಿತ್ತು. ಮೃತ ಶೇಷಗಿರಿ ಮೂರು ಬಾರಿ ವಿದ್ಯುತ್ ಇಲಾಖೆಗೆ ದೂರು ಸಲ್ಲಿಸಿದ್ದರು. ಆದರೆ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೇಷಗಿರಿ ಅವರು ರಿಪ್ಪನ್‌ ಪೇಟೆಯವರಾಗಿದ್ದು, ಇಲ್ಲಿ ಭೂಮಿ ಖರೀದಿಸಿ ಕೃಷಿ ಮಾಡುತ್ತಿದ್ದರು.

ಕೊಪ್ಪಳ ತಾಲೂಕಿನ ಗೊಂಡಬಾಳದಲ್ಲಿ ಮಹಿಬೂಬಸಾಬ ಕಲ್ಲಾಬಿಲ್ಲ (33) ಎಂಬ ರೈತರು ಮೃತಪಟ್ಟಿದ್ದಾರೆ. ಸೋಮವಾರ ಅವರು ವಿದ್ಯುತ್ ಪಂಪ್‌ಸೆಟ್‌ ಆರಂಭಿಸಲು ಹೋದಾಗ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟರು. ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Road accident | ಕುಷ್ಟಗಿ, ಮೈಸೂರಿನಲ್ಲಿ ಅಪಘಾತ: ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

Exit mobile version