Site icon Vistara News

Farmer Death | ಚಾಲಕನ ಅಜಾಗರೂಕತೆ; ಕಟಾವು ಮಷಿನ್‌ಗೆ ಸಿಲುಕಿ ರೈತ ಸಾವು!

former death

ಧಾರವಾಡ: ಇಲ್ಲಿನ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಕಟಾವು ಮಷಿನ್‌ಗೆ ಸಿಲುಕಿ ರೈತರೊಬ್ಬರು (Farmer Death) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹುಸೇನ್ ಸಾಬ್ ಪಾಪಣ್ಣನವರ (59) ಮೃತ ದುರ್ದೈವಿ.

ಹುಸೇನ್‌ ಸಾಬ್‌ ತಮ್ಮ ಹೊಲದಲ್ಲಿ ಹೆಸರು ಬೇಳೆಯನ್ನು ಬೆಳೆದಿದ್ದರು. ಇದು ಕೊಯ್ಲಿಗೆ ಬಂದಿದ್ದರಿಂದ ಬೆಳೆಯನ್ನು ಕಟಾವು ಮಾಡಿಸಲು ಮುಂದಾಗಿದ್ದರು. ಈ ವೇಳೆ ಸೋಮವಾರ ಕಟಾವು ಮಷಿನ್‌ ಮೂಲಕ ಕಟಾವು ಕಾರ್ಯಾಚರಣೆ ನಡೆಯುತ್ತಲಿತ್ತು. ಹುಸೇನ್‌ ಸಾಬ್‌ ಜಮೀನಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ರೈತನ ಮೇಲೆ ಮಷಿನ್‌ ವಾಹನ ಹತ್ತಿದೆ. ಪರಿಣಾಮ ರೈತ ಹುಸೇನ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | ಫರ್ಟಿಲೈಜರ್ಸ್‌ ಅಂಗಡಿಯಲ್ಲಿಯೇ ವಿಷ ಸೇವಿಸಿದ್ದ ರೈತ: ಚಿಕಿತ್ಸೆ ಫಲಿಸದೆ ಸಾವು

Exit mobile version