Site icon Vistara News

Fire accident | ಅಗ್ನಿ ಕೊಂಡ ಹಾಯುವಾಗ ಎಡವಿ ಬಿದ್ದ ಅರ್ಚಕಿಗೆ ಗಂಭೀರ ಗಾಯ: ಕಳಸ ಹೊತ್ತು ಸಾಗುವಾಗ ದುರಂತ

konda fire

ದೊಡ್ಡಬಳ್ಳಾಪುರ: ರೇಣುಕಾ ಯಲ್ಲಮ್ಮ ದೇವಿಯ ಅಗ್ನಿ ಕೊಂಡ ಹಾಯುವ ವೇಳೆ ಅರ್ಚಕಿಯೊಬ್ಬರು ಎಡವಿ ಬೆಂಕಿಗೆ ಬಿದ್ದು ಗಾಯಗೊಂಡಿದ್ದಾರೆ (Fire accident). ದೊಡ್ಡಬಳ್ಳಾಪುರ ದೊಡ್ಡಬೆಳವಂಗಲದ ಅಜ್ಜನ ಕಟ್ಟೆ ಸಮೀಪದ ಶಾಂತಿ ನಗರದಲ್ಲಿ ಘಟನೆ ನಡೆದಿದೆ.

ಅರ್ಚಕಿ ಅನು ಜೋಗತಿ ಎಂಬವರು ಕಳಸ ಹೊತ್ತು ಕೊಂಡದಲ್ಲಿ ಹೋಗುವಾಗ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಇಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಅಗ್ನಿ ಕೊಂಡ ಹಾಯುವ ಜಾತ್ರೆ ಇತ್ತು.

ಕೆಂಡದಲ್ಲಿ ಬಿದ್ದ ಅರ್ಚಕಿಯನ್ನು ಸ್ಥಳೀಯರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅರ್ಚಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Nagavara Metro Pillar | ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿತ: ಸ್ಕೂಟಿಯಲ್ಲಿ ತೆರಳುತ್ತಿದ್ದ ಅಮ್ಮ, ಮಗು ದುರ್ಮರಣ

Exit mobile version