Site icon Vistara News

Fire Accident‌ | ರಾತ್ರಿ ಪಾರ್ಟಿ ಮಾಡಿ ಗುಡಿಸಲಲ್ಲಿ ಮಲಗಿದ್ದಾಗ ಬೆಂಕಿ ಅವಘಡ; ಒಬ್ಬ ಸಜೀವ ದಹನ

hut fire in bidar

ಬೀದರ್: ಗುಡಿಸಲಿನಲ್ಲಿ ರಾತ್ರಿ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಆಕಸ್ಮಿಕ ಬೆಂಕಿ (Fire Accident‌) ತಗುಲಿ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದರೆ, ಮತ್ತೊಬ್ಬರು ಸಣ್ಣಪುಟ್ಟ ಸುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿರುವ ಘಟನೆ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ನಡೆದಿದೆ.

60 ವರ್ಷ ಜಗನಾಥ ಹಲಗೆ ಸಜೀವ ದಹನಕ್ಕೆ ಒಳಗಾದ ವ್ಯಕ್ತಿ. ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬ ಇಬ್ಬರು ತಡ ರಾತ್ರಿ ಗುಡಿಸಲಿನಲ್ಲಿ ಪಾರ್ಟಿ ಮಾಡಿದ್ದರು. ಇಬ್ಬರೂ ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಬೆಂಕಿ ಹೊತ್ತಿಕೊಂಡಾಗ ಇಬ್ಬರಿಗೂ ಎಚ್ಚರವಾಗಿದೆ. ಈ ವೇಳೆ ಜಗನಾಥ ಹಲಗೆ ಅವರ ರಕ್ಷಣೆಗೆ ಜತೆಯಲ್ಲಿದ್ದ ಮಾರುತಿ ಹೋದರಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಂಕಿ ತೀವ್ರತೆ ಪಡೆದುಕೊಂಡಿದ್ದರಿಂದ ಹೊರಗೆ ಧಾವಿಸಿದ್ದಾರೆ. ಆದರೆ, ಇದೇ ವೇಳೆ ಜಗನಾಥ ಬೆಂಕಿಗೆ ಆಹುತಿಯಾಗಿದ್ದಾರೆ. ಸುದ್ದಿ ತಿಳಿದ ಜಗನಾಥ ಹಲಗೆ ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದು, ರೋಧಿಸುತ್ತಿದ್ದಾರೆ.

ರಾತ್ರಿ ಪಾರ್ಟಿ
ಜಮೀನಿನಲ್ಲಿ ಜೋಳ ಕಾಯುವ ಸಂಬಂಧ ಪುಟ್ಟ ಗುಡಿಸಲನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಗೆ ಬಂದಿದ್ದ ಜಗನಾಥ ಹಲಗಿ ಹಾಗೂ ಮಾರುತಿ ಪಾರ್ಟಿ ಮಾಡಿದ್ದಾರೆ. ರಾತ್ರಿ ಮದ್ಯದ ನಶೆಯಲ್ಲಿಯೇ ಮಲಗಿದ್ದಾರೆನ್ನಲಾಗಿದೆ. ಈ ವೇಳೆ ಗುಡಿಸಲಿಗೆ ಬೆಂಕಿ ತಗುಲಿದೆ. ಇಬ್ಬರೂ ನಿದ್ದೆಗೆ ಜಾರಿದ್ದರಿಂದ ಮೊದಲಿಗೆ ತಿಳಿದಿರಲಿಲ್ಲ. ತಿಳಿಯುವ ಹೊತ್ತಿನಲ್ಲಿ ಜಗನಾಥರನ್ನು ರಕ್ಷಣೆ ಮಾಡಲು ಮಾರುತಿಗೆ ಸಾಧ್ಯವಾಗದೇ ಸಣ್ಣ ಪುಟ್ಟ ಸುಟ್ಟ ಗಾಯಗಳಿಂದ ಹೊರಗೆ ಬಂದಿದ್ದಾರೆ. ಭಾಲ್ಕಿ ತಾಲೂಕಿನ ಗ್ರಾಮೀಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Pavitra Lokesh | ಶೀಘ್ರವೇ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್‌ಗೆ ಲಿಪ್‌ಕಿಸ್‌ ಕೊಟ್ಟ ನರೇಶ್‌: ವಿಡಿಯೊ ಇಲ್ಲಿದೆ!

Exit mobile version