Site icon Vistara News

Elephant tusk | ಆನೆ ದಂತ ಮಾರಾಟಕ್ಕೆ ಯತ್ನಿಸಿದ ಐವರು ಖದೀಮರು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ

Elephant tusk

ಚಾಮರಾಜನಗರ: ಆನೆ ದಂತ (Elephant tusk) ಮಾರಾಟಕ್ಕೆ ಯತ್ನಿಸಿದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ 181ರ ಬಸವಪುರ ಸಮೀಪ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ತಮಿಳುನಾಡು ಮೂಲದ ರಂಗಸ್ವಾಮಿ, ಸಂಜೀವಕುಮಾರ, ವಿನೋತ್, ಕತಿರೇಸನ್, ಸೆಲ್ವನಾಯಗಂ ಬಂಧಿತರು.

ಆರೋಪಿಗಳು ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಶಯ ಬಂತು. ತಮಿಳುನಾಡಿನ ಈ ವ್ಯಕ್ತಿಗಳು ಇಲ್ಲೇಕೆ ತಿರುಗಾಡುತ್ತಿದ್ದಾರೆ ಎಂದು ಸಂಶಯದಿಂದ ತಪಾಸಣೆ ನಡೆಸಿದಾಗ ಕಾರಿನಲ್ಲಿ ಎರಡು ದಂತಗಳು ಕಂಡುಬಂದವು. ಇದೀಗ ಕೃತ್ಯಕ್ಕೆ ಬಳಸಿದ ಕಾರು ಮತ್ತು ದಂತಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಖದೀಮರು ತಮಿಳುನಾಡಿನಲ್ಲಿ ಆನೆಯ ದಂತ ಮಾರಾಟ ಮಾಡಲು ಹೋಗಿದ್ದರು. ಅಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಪುನಃ ಗುಂಡ್ಲುಪೇಟೆಗೆ ಬಂದಿದ್ದರು.

ಇದನ್ನೂ ಓದಿ | Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್​ ಬಡಿಯಬೇಕಾಯ್ತು !

Exit mobile version