Site icon Vistara News

Karnataka Weather : ಬೆಂಗಳೂರಿನಲ್ಲಿ ಮಂಜಿನ ನೋಟ; ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯಾಟ

Cold Weather with girl

ಬೆಂಗಳೂರು: ರಾಜ್ಯದ ಹಲವು ಕಡೆ ಮಳೆ (Rain News) ಪ್ರಮಾಣ ಕಡಿಮೆಯಾಗಿದೆ. ಹೆಚ್ಚು ಕಡೆ ಬೆಳಗ್ಗೆ ವೇಳೆ ಬಿಸಿಲು ಇಲ್ಲವೇ ಮೋಡ ಕವಿದ ವಾತಾವರಣವನ್ನು ಕಾಣುವಂತಾಗಿದೆ. ಇದರ ಜತೆಗೆ ರಾತ್ರಿ ಸಂದರ್ಭದಲ್ಲಿ ಚಳಿ ಬೀಳುತ್ತಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ (south interior) ಕೆಲವು ಕಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather) ಉಲ್ಲೇಖಿಸಿದೆ.

ಶುಕ್ರವಾರ ರಾಜ್ಯದ ಕೆಲವು ಕಡೆ ಮಳೆಯಾಗಿದೆಯಾದರೂ ಸಾಧಾರಣವಾಗಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲಿನ ಧಗೆ ಇತ್ತು. ಮತ್ತು ಹಲವು ಕಡೆ ರಾತ್ರಿ ವೇಳೆಗೆ ಚಳಿ ಹೆಚ್ಚಿತ್ತು. ಈಗ ಪುನಃ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈ ಭಾಗಗಳಲ್ಲಿ ಮಳೆ ಅಷ್ಟಾಗಿ ಬಾರದು ಎಂದು ಹೇಳಲಾಗಿದೆ. ಈ ವಾತಾವರಣವು ಇನ್ನೆರಡು ದಿನ ಹೀಗೆಯೇ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಆದರೆ, ರಾತ್ರಿ ವೇಳೆ ಸ್ವಲ್ಪ ಚಳಿ ಬೀಳಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರಲ್ಲಿ ರಾತ್ರಿ ಚಳಿ

ಬೆಂಗಳೂರಿನ ಹವಾಮಾನ ವರದಿಯನ್ನು ಗಮನಿಸುವುದಾದರೆ ಇಲ್ಲಿ ಬೆಳಗ್ಗೆ ಹೊತ್ತು ಬಿಸಿಲಿನ ವಾತಾವರಣ ಇರಲಿದೆ. ಹೀಗಾಗಿ ಸ್ವಲ್ಪ ಸೆಖೆ ಕೂಡಾ ಆಗಲಿದೆ. ಆದರೆ, ಬಹುತೇಕ ಸಮಯ ಮೋಡ ಮುಸುಕಿದ ವಾತಾವರಣ ಇರುವ ಸಾಧ್ಯತೆ ಹೆಚ್ಚಿದೆ. ಇನ್ನು ಎರಡು ದಿನದ ವಾತಾವರಣವನ್ನು ನೋಡುವುದಾದರೆ ಮುಂಜಾನೆ ಮೋಡ ಕವಿದ ವಾತಾವರಣ ಇರುತ್ತದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಹೀಗಾಗಿ ರಾತ್ರಿ ವೇಳೆ ತುಸು ಚಳಿಯ ವಾತಾವರಣ ಹೆಚ್ಚಾಗಿ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Love, Sex and Dokha: ಸಂಸದ ಪುತ್ರನ ಲವ್‌, ಸೆಕ್ಸ್‌, ದೋಖಾ ಪ್ರಕರಣ; ಮತ್ತೊಂದು ಆಡಿಯೊ ವೈರಲ್

ನ. 16ರಂದು ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ!

ಇನ್ನು ಶುಕ್ರವಾರ (ನ. 17) ರಾಜ್ಯದಲ್ಲಿನ ಉಷ್ಣಾಂಶವನ್ನು ಗಮನಿಸುವುದಾದರೆ ವಿಜಯಪುರದಲ್ಲಿ ಅತಿ ಕಡಿಮೆ ಅಂದರೆ 14.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಹೀಗಾಗಿ ಆ ಭಾಗದಲ್ಲಿ ವಿಪರೀತ ಚಳಿಯ ಸ್ಥಿತಿ ನಿರ್ಮಾಣವಾಗಿತ್ತು.

Exit mobile version