Site icon Vistara News

H Narasimha Murthy : ಕನ್ನಡ ಪ್ರಭ ಮಾಜಿ ಸುದ್ದಿ ಸಂಪಾದಕ ಎಚ್‌.ಎನ್‌. ಮೂರ್ತಿ ನಿಧನ; ನೇತ್ರ, ದೇಹದಾನಕ್ಕೆ ಕುಟುಂಬಸ್ಥರ ನಿರ್ಧಾರ

HN Murthy

ಬೆಂಗಳೂರು: ಕನ್ನಡ ಪ್ರಭ ದಿನ ಪತ್ರಿಕೆಯ ಮಾಜಿ ಸುದ್ದಿ ಸಂಪಾದಕ ಎಚ್.ಎನ್. ಮೂರ್ತಿ (ಎಚ್. ನರಸಿಂಹ ಮೂರ್ತಿ) (H Narasimha Murthy) ಅವರು ಸೋಮವಾರ (ಜ.೧೬) ಬೆಳಗ್ಗೆ ನಿಧನರಾದರು.

ಇವರಿಗೆ 96 ವರ್ಷ ವಯಸ್ಸಾಗಿತ್ತು. ಮೂರ್ತಿ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಮುಖ್ಯ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಕನ್ನಡ ಪ್ರಭ ಪತ್ರಿಕೆ ೧೯೬೭ರ ನವೆಂಬರ್‌ 4ರಂದು ಆರಂಭವಾದಾಗ ಇವರು ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1985ರ ಜುಲೈನಲ್ಲಿ ಇವರು ನಿವೃತ್ತರಾದರು. ಬಳಿಕ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಹಾಗೂ ಪ್ರಜಾಮತ ವಾರ ಪತ್ರಿಕೆಗಳಲ್ಲಿ ಕೆಲವು ಸಮಯ ಕಾರ್ಯನಿರ್ವಹಿಸಿದ್ದರು. ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಮೂರ್ತಿ ಅವರ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಹಾಗೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | IT Raid : ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕನ ಮನೆ ಮೇಲೆ ಐಟಿ ದಾಳಿ; ಚಿಕ್ಕಮಗಳೂರು ಕಾಂಗ್ರೆಸ್‌ ಕಿಡಿ

Exit mobile version