Site icon Vistara News

ಯುವಕನನ್ನು ರಕ್ಷಿಸಿ ಮಾನವಿಯತೆ ಮೆರೆದ ಪೋಲಿಸ್‌ ಪೇದೆ

ಮಾನವಿಯತೆ ಮೆರೆದ ಪೋಲಿಸ್‌ ಪೇದೆ

ಗದಗ: ಜೀವನದಲ್ಲಿ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯವಕನನ್ನು ಗದಗ ನಗರದ ಟ್ರಾಫಿಕ್ ಕಾನ್ಸ್‌ಟೇಬಲ್‌ ಸಮಯ ಪ್ರಜ್ಞೆ ತೋರಿ ರಕ್ಷಣೆ ಮಾಡಿದ್ದಾರೆ. ಗದಗ ನಗರದ ರಂಗನವಾಡಿ ಓಣಿಯ ನಿವಾಸಿ ಮುಬಾರಕ್ ಮುನ್ನಾಸಾಬ ಧಾರವಾಡ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

ನಗರದ ಐತಿಹಾಸಿಕ ಕೆರೆಯಾದ ಭೀಷ್ಮ‌ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯವಕ ಯತ್ನಿಸಿದ್ದ. ನೋಡ ನೋಡುತ್ತಿದ್ದಂತೆ ಕೆರೆಗೆ ಹಾರಿದ್ದ ಯುವಕನನ್ನ ನೋಡಿ ಪೇದೆ ಬೆಚ್ಚಿಬಿದ್ದರು. ತಕ್ಷಣ ಟ್ರಾಫಿಕ್ ಪೊಲೀಸ್ ಗಂಗಾಧರ ಪೂಜಾರ ಇದನ್ನು ಗಮನಿಸಿದ್ದಾರೆ. ತಕ್ಷಣವೇ ಸ್ಥಳೀಯ ಮಹೇಶ ವಡ್ಡರ ಸಹಾಯ ಪಡೆದು ಕಾರ್ಯಪ್ರವೃತ್ತರಾಗಿದ್ದಾರೆ. ಯುವನನ್ನ ರಕ್ಷಿಸಿದ್ದಾರೆ, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನು ಓದಿ: ಮಾನವೀಯತೆ ಮೆರೆದ ಪೊಲೀಸರು, ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ

Exit mobile version