Site icon Vistara News

Gali Janardhana Reddy | ಗಂಗಾವತಿಯಲ್ಲಿ ರೆಡ್ಡಿ ಎರಡನೇ ಇನಿಂಗ್ಸ್‌; 101 ಟಗರುಗಳ ಕಾಣಿಕೆ ಘೋಷಿಸಿದ ಅಭಿಮಾನಿ

ಕೊಪ್ಪಳ: ಇತ್ತೀಚೆಗಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ಕುಟುಂಬ ಇಲ್ಲಿನ ಗಂಗಾವತಿಯಲ್ಲಿ ಹೊಸ ಮನೆ ಖರೀದಿಸಿ ಗೃಹ ಪ್ರವೇಶ ನೆರವೇರಿಸಿದೆ. ಜನಾರ್ದನ ರೆಡ್ಡಿ ಸಕ್ರಿಯ ರಾಜಕೀಯಕ್ಕೆ ರೀ ಎಂಟ್ರಿ ಆಗುತ್ತಿರುವ ಹಿನ್ನೆಲೆ ಗಂಗಾವತಿಯ ಅಭಿಮಾನಿಯೊಬ್ಬ 101 ಟಗರುಗಳನ್ನು ಕಾಣಿಕೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಗಂಗಾವತಿಯ ಯಮನೂರಪ್ಪ ಪುಂಡಗೌಡ ಎಂಬ ಅಭಿಮಾನಿ ಟಗರು ಕಾಣಿಕೆಯನ್ನು ಘೋಷಣೆ ಮಾಡಿದ್ದಾರೆ. ಗಂಗಾವತಿಯಲ್ಲಿ ಮನೆ ಮಾಡಿರುವ ರೆಡ್ಡಿಗೆ ಡಿಸೆಂಬರ್‌ 21ರಂದು ಒಂದು ಟಗರು ಹಾಗೂ ಚುನಾವಣೆಯ ಸಂದರ್ಭದಲ್ಲಿ 100 ಟಗರು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಗಾಲಿ ಜನಾರ್ದನ ರೆಡ್ಡಿಯವರು ಗಂಗಾವತಿಯಿಂದ ಸ್ಪರ್ಧಿಸಬೇಕು. ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೂ ಸರಿ, ಪಕ್ಷೇತರರಾಗಿ ನಿಂತರೂ ಸರಿ ಆದರೆ, ಅವರು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಅಭಿಮಾನಿ ಯಮನೂರಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ | karnataka Election | ಜನಾರ್ದನ ರೆಡ್ಡಿ ಬಿಜೆಪಿ ಬಿಡಲ್ಲ, ಹೊಸ ಪಕ್ಷ ಕಟ್ಟಲ್ಲ: ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಸ್ಪಷ್ಟೋಕ್ತಿ

Exit mobile version