Site icon Vistara News

Ganja Seized: ಕುಮಟಾದ ಮೂರೂರು ಗುಡ್ಡದ ಬಳಿ ಗಾಂಜಾ ವಶ; ಇಬ್ಬರು ಆರೋಪಿಗಳ ಸೆರೆ

Ganja Seized Kumta police

#image_title

ಕಾರವಾರ: ಕುಮಟಾ ತಾಲೂಕಿನ ಮೂರೂರು ಗುಡ್ಡದ ವಿಶ್ವಕರ್ಮ ಹಾಲ್ ಬಳಿ ಗಾಂಜಾ ಮಾರಾಟ (Ganja Seized) ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.

ಮೂರೂರು ಅಂಗಡಿಕೇರಿ ನಿವಾಸಿ ಪ್ರಸಾದ ಹೊಸಳ್ಳಿ (24) ಮತ್ತು ಕಲ್ಲಬ್ಬೆ ನಿವಾಸಿ ಸುನೀಲ ಸತ್ಯನಾರಾಯಣ ಮುಕ್ರಿ (30) ಬಂಧಿತ ಆರೋಪಿಗಳು. ಇವರಿಬ್ಬರು ಮೂರೂರು ಗುಡ್ಡದ ವಿಶ್ವಕರ್ಮ ಸಮಾಜದ ಹಾಲ್ ಬಳಿ ನಿಂತಿರುವಾಗ ಕುಮಟಾ ಪೊಲೀಸರು ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಇವರ ಬಳಿ ಸುಮಾರು 10 ಸಾವಿರ ರೂ. ಮೌಲ್ಯದ 230 ಗ್ರಾಂ ಗಾಂಜಾ ಪತ್ತೆಯಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸಿದ ಪೊಲೀಸರು ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿತರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಪ್ರಸಾದ್ ಹೊಸಳ್ಳಿ ಮತ್ತು ಸುನೀಲ ಮುಕ್ರಿ.

ಇದನ್ನೂ ಓದಿ: SCST Reservation: ಮತ್ತೆ ಮತ್ತೆ ಅವರೇ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ; ಸೋಷಿಯಲ್‌ ಆಡಿಟಿಂಗ್‌ ಆಗಬೇಕು ಎಂದ ಸಿಎಂ ಬೊಮ್ಮಾಯಿ

ಕುಮಟಾ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಹವಾಲ್ದಾರ್ ಗಣೇಶ ನಾಯ್ಕ, ರಾಜು ನಾಯ್ಕ ಕಾನ್‌ಸ್ಟೇಬಲ್‌ಗಳಾದ ಗುರು ನಾಯಕ, ಶಿವಾನಂದ, ಪ್ರದೀಪ, ಹುಚ್ಚಪ್ಪ, ಮಲ್ಲಿಕಾರ್ಜುನ, ಪ್ರೇಮಾನಂದ, ಸಾಧನಾ ಭಾಗಿಯಾಗಿದ್ದರು. ಪಿಎಸ್‌ಐ ಮಂಜುನಾಥ ಗೌಡರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ಹೊರಡಿಸಿದೆ.

Exit mobile version