Site icon Vistara News

Group Clash: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಘರ್ಷಣೆ; ಹಲವು ವಾಹನಗಳು ಜಖಂ, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ

a clash between two groups over a trivial reason, Several vehicles damaged, police rush to the spot

a clash between two groups over a trivial reason, Several vehicles damaged, police rush to the spot

ವಿಜಯನಗರ: ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ(Group clash) ನಡೆದಿದೆ. ಒಂದು ಗುಂಪು ಮನೆಗಳಿಗೆ ನುಗ್ಗಿದ್ದು ಕಣ್ಣಿಗೆ ಕಂಡ ಎಲ್ಲ ವಸ್ತುಗಳನ್ನು ಒಡೆದು ಹಾಕಿದೆ. ಟಿವಿ, ಚೇರು, ಮನೆಯ ಬಾಗಿಲು, ಕಿಟಕಿ ಗಾಜು ಪುಡಿ ಪುಡಿ ಮಾಡಿದ್ದಾರೆ.

ಬಾಗಿಲು, ಕಿಟಕಿ ಗಾಜು ಪುಡಿ ಪುಡಿ

ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ದೊಡ್ಡದಾದ ಕಲ್ಲುಗಳಿಂದ ಹೊಡೆದು ಜಖಂಗೊಳಿಸಲಾಗಿದೆ. ಹೋಳಿ ವಿಚಾರವಾಗಿ ನಡೆದಿದ್ದ ಸಣ್ಣ ಜಗಳವು ಎರಡು ಗುಂಪುಗಳ ನಡುವೆ ಗಲಾಟೆಗೆ ಕಾರಣವಾಗಿದೆ. ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಮನೆಯಲ್ಲಿದ್ದ ಟಿವಿ ಸೇರಿ ಹಲವು ವಸ್ತುಗಳು ಜಖಂ

ಇದನ್ನೂ ಓದಿ: Sumalatha Ambareesh : ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಫಿಕ್ಸ್‌; ಮಧ್ಯಾಹ್ನ ಅಧಿಕೃತ ಘೋಷಣೆ

ಸಿಕ್ಕ ಸಿಕ್ಕ ಮನೆಗಳಿಗೆ ಕಲ್ಲು ಎಸೆಯುತ್ತಿರುವ ಯುವಕರ ಗುಂಪು

ಇತ್ತ ಗಲಭೆ ಸೃಷ್ಟಿ ಆಗುತ್ತಿದ್ದಂತೆ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎರಡು ಗುಂಪುಗಳ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version