Site icon Vistara News

15 ವರ್ಷದ ಸಲಗ ಅನುಮಾನಾಸ್ಪದ ಸಾವು

ಸಲಗ

ಹಾಸನ : 15 ವರ್ಷದ ಸಲಗ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ಬೇಲೂರು ತಾಲ್ಲೂಕಿನ ಗೂರ್ಗಿಹಳ್ಳಿ ಗ್ರಾಮದ ಬಳಿ ಮೃತದೇಹ ಪತ್ತೆಯಾಗಿದೆ. ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆಗೈದಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಸಯ್ಯದ್ ಸತ್ತರ್ ಎಂಬುವವರ ತೋಟದ ಸಮೀಪದಲ್ಲಿ ಸಲಗ ಸತ್ತಿದ್ದು, ದೇಹದ ಮೇಲೆ ರಕ್ತ ಸಿಕ್ತವಾದ ಗಾಯದ ಗುರುತುಗಳು ಪತ್ತೆಯಿಂದ ಅನುಮಾನಗಳು ಉದ್ಭವವಾಗಿದೆ. ಕಾಡಾನೆ ಹಾವಳಿ ಹೆಚ್ಚಾಗಿದ್ದರಿಂದ ರೊಚ್ಚಿಗೆದ್ದು ಗುಂಡು ಹಾರಿಸಿ ಹತ್ಯೆಗೈದಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | ಚಿಕ್ಕಮಗಳೂರಿನಲ್ಲಿ ಮಗನ ಪಬ್‌ಜೀ ಹುಚ್ಚಾಟ ತಡೆದ ತಾಯಿ ಗುಂಡೇಟಿಗೆ ಬಲಿ

ಈಗಾಗಲೇ ಅರೇಹಳ್ಳಿ, ಮಲಸಾವರ ಸುತ್ತಮುತ್ತ 30ಕ್ಕೂ ಹೆಚ್ಚು ಕಾಡೆನಗಳು ಹಿಂಡು ಇದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿದೆ. ಇತ್ತೀಚಿಗೆ ಅರೇಹಳ್ಳಿ ಭಾಗದಲ್ಲಿ ಕಾಡಾನೆ ದಾಳಿಗೆ ನಾಲ್ವರು ಕಾರ್ಮಿಕರು ಬಲಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದು, ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ | Viral Video; ಫೋಟೋಕ್ಕಾಗಿ ಮೊಬೈಲ್‌ ತೆಗೆದ ಹುಡುಗಿ ಮುಖಕ್ಕೆ ಸೊಂಡಿಲಿನಿಂದ ಹೊಡೆದ ಆನೆ

Exit mobile version