Site icon Vistara News

ಬಂಜಾರ ಗುರುಪೀಠದ ಜಗದ್ಗುರು ಮೇಲೆ ಹಲ್ಲೆ

halle

ಹಾವೇರಿ : ಸವಣೂರು ತಾಲೂಕಿನ ಕೃಷ್ಣಾಪುರದ ಬಂಜಾರ ಗುರುಪೀಠದ ಜಗದ್ಗುರು ಡಾ. ಕುಮಾರ ಮಹಾರಾಜರ ಮೇಲೆ ಕ್ಷುಲಕ ಕಾರಣಕ್ಕೆ ಹಲ್ಲೆ ನಡೆದಿದೆ.

ಆರೋಪಿ ಟ್ರಾಕ್ಟ್‌ರ್‌ನಲ್ಲಿ ಜೋರಾಗಿ ಸ್ಪೀಕರ್‌ ಹಾಕಿಕೊಂಡು ಹೋಗುತ್ತಿದ್ದ. ಇದರಿಂದ ಅಕ್ಕಪಕ್ಕದವರಿಗೆ ಭಾರೀ ತೊಂದರೆ ಆಗುತ್ತಿತ್ತು. ಇದರಿಂದ ಪೂಜೆಗೆ ತೊಂದರೆ ಆಗುತ್ತಿದೆ, ಸೌಂಡ್‌ ಕಡಿಮೆ ಮಾಡು ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ | ವಿಧಾನ ಪರಿಷತ್‌ ಚುನಾವಣೆ ಪ್ರಯುಕ್ತ ಹಾವೇರಿಯಲ್ಲಿ ಜೂನ್ 17 ರವರೆಗೆ ನೀತಿ ಸಂಹಿತೆ ಜಾರಿ

ಸ್ವಾಮೀಜಿ ಹೀಗೆ ಹೇಳಿದಾಗ ಸುಮ್ಮನೆ ಹೋಗಿದ್ದಾನೆ ಚಾಲಕ. ಸಂಜೆಯ ಹೊತ್ತಿಗೆ ಗುಂಪು ಕಟ್ಟಿಕೊಂಡು ಟ್ರ್ಯಾಕ್ಟರ್‌ನೊಂದಿಗೆ ಸೌಂಡ್‌ ಹೆಚ್ಚಿಸಿಕೊಂಡು ಪುನಃ ಪೀಠದ ಬಳಿ ಬಂದಿದ್ದಾನೆ.  ಸ್ವಾಮೀಜಿಯನ್ನು ಜಮೀನಿನಲ್ಲೆಲ್ಲ ಎಳೆದಾಡಿ ಮೇಲೆ ಹಲ್ಲೆ ಮಾಡಿದ್ದಾರೆ. ನೀನು ದಲಿತ ಸ್ವಾಮಿ, ನಿಮ್ಮ ಪಂಗಡ ಪರಿಶಿಷ್ಟ ಜಾತಿಗೆ ಸೇರಿದೆ ಎಂದು ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಕೂಗಾಡಿ ಜೀವ ಬೇದರಿಕೆ ನೀಡಿದ್ದಾರೆ. ಪ್ರಕರಣದ ನಂತರ ಸ್ವಾಮೀಜಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಇದನ್ನೂ ಓದಿ | ಹಾವೇರಿ ‘ಹೊಂಡ’ ಸಿಟಿ; ರಸ್ತೆಯಲ್ಲಿ ಗಾಡಿ ಪಲ್ಟಿ!

Exit mobile version