Site icon Vistara News

Hosakote News: ಹೂಳು ತುಂಬಿದ್ದ ಕಲ್ಯಾಣಿಗೆ ಬಿದ್ದು ಬಾಲಕಿ ದಾರುಣ ಸಾವು; 6 ವರ್ಷದ ಬಾಲಕ ಪಾರು

ಕಲ್ಯಾಣಿಗೆ ಬಿದ್ದು ಬಾಲಕಿ ಸಾವು

#image_title

ಬೆಂಗಳೂರು ಗ್ರಾಮಾಂತರ: ಹೂಳು ತುಂಬಿದ್ದ ಕಲ್ಯಾಣಿಯೊಂದಕ್ಕೆ ಬಾಲಕಿಯೊಬ್ಬಳು ಬಿದ್ದು ಮೃತಪಟ್ಟ ದಾರುಣ ಘಟನೆ ಹೊಸಕೋಟೆ (Hosakote News) ತಾಲೂಕಿನ ನಂದಗುಡಿಯಲ್ಲಿ ನಡೆದಿದೆ.‌ ಹರ್ಷಿತಾ (15) ಮೃತ ದುರ್ದೈವಿ.

ಹರ್ಷಿತಾ ತನ್ನ 6 ವರ್ಷದ ಸಹೋದರ ಅಭಿಲಾಷ್‌ ಜತೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಆಯತಪ್ಪಿ ಇಬ್ಬರೂ ಕಲ್ಯಾಣಿಗೆ ಬಿದ್ದಿದ್ದಾರೆ. ಹೂಳು ತುಂಬಿದ ಪರಿಣಾಮ ಮೇಲೆ ಬರಲು ಸಾಧ್ಯವಾಗದೇ ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಲು ಕಲ್ಯಾಣಿಗೆ ಹಾರಿದ್ದಾರೆ.

ಹೂಳು ತುಂಬಿರುವ ಕಲ್ಯಾಣಿಯಲ್ಲಿ ಬಿದ್ದು ಬಾಲಕಿ ಸಾವು

ಇಬ್ಬರನ್ನು ಮೇಲಕ್ಕೆ ಎತ್ತಿದಾಗ, ಹರ್ಷಿತಾ ಉಸಿರುಗಟ್ಟಿ ಮೃತಪಟ್ಟಿದ್ದರೆ, ಅಭಿಲಾಷ್ (6) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಲ್ಯಾಣಿಗೆ ಬೇಲಿ ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ. ನಂದಗುಡಿ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾಳೆಂದು ಸ್ಥಳೀಯರು ಆರೋಪಿಸಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Crime News: ನೇಣುಕುಣಿಕೆಯಲ್ಲಿ ಶವಗಳು, ತಾಯಿ- ಮಗಳ ಅನುಮಾನಾಸ್ಪದ ಸಾವು

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Exit mobile version