Site icon Vistara News

Lok Sabha Election 2024: ಮುಸ್ಲಿಮರನ್ನು ಪದೇಪದೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಬೇಡಿ: ಸಚಿವ ಸಂತೋಷ ಲಾಡ್

Minister Santosh lad statement in hubli

ಹುಬ್ಬಳ್ಳಿ: ಮುಸ್ಲಿಮರಿಗೆ ಪದೇಪದೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಬಿಜೆಪಿ ವಿರುದ್ಧ (Lok Sabha Election 2024) ಹರಿಹಾಯ್ದರು.

ಹುಬ್ಬಳ್ಳಿಯಲ್ಲಿ ನಡೆದ ವಿಶ್ವ ಮಾನವ ದಿನಾಚರಣೆ ಹಾಗೂ ಡಾ. ಬಿ.ಆರ್‌.ಅಂಬೇಡ್ಕರ್ ಮತ್ತು ಬಸವಣ್ಣನವರ ಕುರಿತ ವಿಶೇಷ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Share Market: ಇಸ್ರೇಲ್-‌ ಇರಾನ್‌ ಯುದ್ಧಕ್ಕೆ ನಲುಗಿದ ಮುಂಬಯಿ ಷೇರುಪೇಟೆ; 6 ಲಕ್ಷ ಕೋಟಿ ರೂಪಾಯಿ ಢಮಾರ್

ಮುಸ್ಲಿಂರಿಗೆ ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಬೇಡಿ, ದೇಶ ವಿಭಜನೆ ಆದ ಮೇಲೆ ಇಲ್ಲಿ ಉಳಿದವರು ನಮ್ಮವರೇ ಎಂದು ತಿಳಿಸಿದರು.

ದೇಶ ವಿಭಜನೆ ಆಗುವುದಕ್ಕೆ ನೆಹರು ಕಾರಣ ಎಂದು ಬಿಜೆಪಿಯವರು ಟೀಕಿಸುತ್ತಾರೆ. ಆದರೆ ಬಿಜೆಪಿಯವರು ನೆಹರು ಅವರಿಗೆ ಧನ್ಯವಾದ ಹೇಳಬೇಕು. ಪಾಕಿಸ್ತಾನಕ್ಕೆ ಹೋಗುವವರು ಹೋದರು, ಇಲ್ಲಿ ಉಳಿದವರು ಉಳಿದರು. ಉಳಿದವರು ನಮ್ಮವರು. ಪದೇ ಪದೇ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಬೇಡಿ ಎಂದು ಬಿಜೆಪಿ ವಿರುದ್ಧ ಸಚಿವ ಸಂತೋಷ್‌ ಲಾಡ್‌ ಹರಿಹಾಯ್ದರು.

ಇದನ್ನೂ ಓದಿ: Accident Case : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ; ಎರಡು ಹೋಳಾಯ್ತು ತಲೆ ಬುರುಡೆ

ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರನ್ನು ಬೆಂಬಲಿಸಿ ಸಂಸತ್ತಿಗೆ ಕಳಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Exit mobile version