Site icon Vistara News

Cow slaughter | ಅಕ್ರಮ ಕಸಾಯಿ ಖಾನೆಗೆ ಹಿಂದು ಜಾಗರಣ ವೇದಿಕೆ ದಾಳಿ: ಇಬ್ಬರ ಬಂಧನ, ನಾಲ್ಕು ಗೋವುಗಳು ವಶಕ್ಕೆ

Cow slaughter

ಮಂಗಳೂರು: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶನಿವಾರ ಬೆಳ್ಳಂಬೆಳಗ್ಗೆ ಮೂಡುಬಿದರೆ ಬಳಿಯ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿ ಖಾನೆಯನ್ನು (Cow slaughter) ಬಯಲಿಗೆಳೆದಿದ್ದಾರೆ.

ದ.ಕ ಜಿಲ್ಲೆಯ ಮೂಡಬಿದರೆ ತಾಲೂಕಿನ ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವರ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ಕಾರ್ಯಾಚರಣೆ ನಡೆಸುತ್ತಿತ್ತು.

ಬೆಳಿಗ್ಗೆ 4 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದು, ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರಿ ಪ್ರಮಾಣ ಮಾಂಸವನ್ನು ವಶಕ್ಕೆ ಪಡದಿದ್ದಾರೆ.

ರಣಭೀಕರ ಚಿತ್ರಗಳು
ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದಾಗ ಅಲ್ಲಿದ್ದವರು ಯಾವ ಭಾವನೆಗಳೂ ಇಲ್ಲದೆ ಮಾಂಸವನ್ನು ಕತ್ತರಿಸುತ್ತಿದ್ದರು. ಕತ್ತರಿಸಿದ್ದ ತಲೆಯನ್ನು ಮಧ್ಯದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಈ ನಡುವೆ, ತೋಟದಲ್ಲಿ ಅಗೆದು ನೋಡಿದಾಗ ದನದ ತಲೆ ಭಾಗಗಳು ಪತ್ತೆಯಾಗಿವೆ.

ದಾಳಿ ನಡೆಸಿದ ಬಳಿಕ ಮೂವರನ್ನು ಮೂಡಬಿದ್ರೆ ಪೊಲೀಸರಿಗೆ ಹಸ್ತಾಂತರಿಸಿದರು. ಕ್ಲಾರಿನ್ ಅಲ್ವಿನ್ ಮತ್ತು ಗಿಲ್ಬರ್ಟ್ ಮಿರಾಂದ ಬಂಧಿತರು. ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಗೋ ಸಂಪತ್ತು | ಪ್ರಪಂಚಕ್ಕೆ ಭಾರತ ನೀಡಿದ ದಿವ್ಯ ಔಷಧ ಪಂಚಗವ್ಯ

Exit mobile version