Site icon Vistara News

JDS Politics: ಸೀಟ್‌ಗೆ ಗೌಡರು, ಲವ್‌ಗೆ ಸಿದ್ದರಾಮಯ್ಯ: ಶಿವಲಿಂಗೇಗೌಡ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

CM ibrahim

#image_title

ಹಾಸನ: ಶಿವಲಿಂಗೇಗೌಡರನ್ನು ದೇವೇಗೌಡರು ಸ್ವಂತ ಮಗನ ತರ ನೋಡಿಕೊಂಡರು. ಅವರನ್ನು ದೇವೇಗೌಡರು, ಕುಮಾರಸ್ವಾಮಿಗಿಂತ ಜಾಸ್ತಿ ಬೆಳೆಸಿದರು. ಜಾಸ್ತಿ ಬೆಳೆಸಿದ್ದರಿಂದ ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಜನತಾದಳದ ಶಾಸಕನಿಗೆ ಕಾಂಗ್ರೆಸ್ ಜತೆ ಲವ್ವು. ಇವರ ಸೀಟ್‌ಗೆ ಗೌಡರು, ಲವ್‌ಗೆ ಸಿದ್ದರಾಮಯ್ಯ ಬೇಕು ಎಂದು ಶಾಸಕ ಶಿವಲಿಂಗೇಗೌಡ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿಕಾರಿದರು. ಈ ಮೂಲಕ ಜೆಡಿಎಸ್‌ ಪಕ್ಷದ (JDS Politics) ಆಂತರಿಕ ಕಲಹ ಮತ್ತಷ್ಟು ತಾರಕಕ್ಕೇರಿದೆ.

ಅರಸೀಕೆರೆ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜನತಾದಳ ಒಬ್ಬ ಶಿವಲಿಂಗೇಗೌಡನಿಂದ ಇಲ್ಲ. ಇಲ್ಲಿ ಸಾವಿರಾರು ಶಿವಲಿಂಗೇಗೌಡರು ಕುಳಿತಿದ್ದಾರೆ. ಇದು ಸಜ್ಜನರ, ಮರ್ಯಾದಸ್ಥರ, ರೈತರ ಪಾರ್ಟಿ. ಶಿವಲಿಂಗು ನಾವ್ಯಾರು ಜೈಲು, ಬೇಲ್‌ನಲ್ಲಿಲ್ಲ. ಬಿಜೆಪಿ, ಕಾಂಗ್ರೆಸ್‌ನವರು ಜೈಲು, ಬೇಲ್‌ನಲ್ಲಿ ಇದ್ದಾರೆ. ರಾತ್ರಿ ಕಂಡ ಬಾವಿಗೆ ಹಗಲು ಹಾರಲು ಹೋಗಿದ್ದೀಯಾ, ನಿನ್ನ ಮೇಲೆ ನನಗೆ ಅನುಕಂಪ ಇದೆ. ಪಾಪ ಒಳ್ಳೆಯದಾಗುತ್ತದೆ ಎಂದು ಹೋಗುತ್ತಿದ್ದಾನೆ. ಗೋಕರ್ಣದಲ್ಲಿ ಶಿವಲಿಂಗ ಬೇರು ಬಿಟ್ಟ ಹಾಗೆ ಅರಸೀಕೆರೆಯಲ್ಲಿ ಜೆಡಿಎಸ್ ಬೇರು ಬಿಟ್ಟಿದೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ದೇವೇಗೌಡರಿಗೆ 89 ವರ್ಷವಾಗಿದ್ದು, ನಿಮ್ಮ ತಂದೆ ವಯಸ್ಸಿನವರಾಗಿದ್ದಾರೆ. ಅವರಿಗೆ ವಿಷ ಕೊಡುತ್ತಿದ್ದೀರಾ? ಕೊನೆಗಾಲದಲ್ಲಿ ನಾರಾಯಣಪ್ಪ ಮೀನು ತಿನ್ನುವುದನ್ನು ಕಲಿತ ಹಾಗೆ ದೇವೇಗೌಡರಿಗೆ ಮೋಸ ಮಾಡಿ ಹೊರಟಿದ್ದೀರ. ಅವರ ಶಾಪ ನಿನ್ನನ್ನು ಸುಮ್ಮನೆ ಬಿಡಲ್ಲ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಯಾವತ್ತೂ ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ಮಾತನಾಡಲಿಲ್ಲ. ಸೋನಿಯಾಗಾಂಧಿ ಮಾತನಾಡು ಎಂದರೂ ಮಾತನಾಡಲಿಲ್ಲ. ದೇವೇಗೌಡರು ಕಾಯಿಲೆ ಬಿದ್ದರೆ ಒಂದು ಸಾರಿ ಹೋಗಿ ನೋಡುವ ಸೌಜನ್ಯ ನಿನಗಿಲ್ಲ. ಸಾಬರ ಕೇರಿಗೆ ಹೋಗಿ ಒಬ್ಬೊಬ್ಬರಿಗೆ 300 ರೂಪಾಯಿ ಕೊಟ್ಟು ಸಭೆಗೆ ಹೋಗಬೇಡಿ ಎಂದು ಹೇಳಿದ್ದಾನೆ. ಶಿವಲಿಂಗು ನಾವು ಸಾಬ್ರು, ಋಣ ಮಾರುವವರಲ್ಲ ಋಣ ತೀರಿಸುವವರು ಎಂದು ಹೇಳಿದರು.

ಮುಂದಿನ ಉಪ ಮುಖ್ಯಮಂತ್ರಿ ಬಂಡೆಪ್ಪ ಕಾಶಂಪೂರ್

ಶಿವಲಿಂಗು ನಿನಗೆ ಆಸ್ತಿ ಇದೆ ಕಣ್ಲಾ, ದೇವೇಗೌಡರಿಗೆ ಆಸ್ತಿ ಇಲ್ಲ, ಅವರಿಗೆ ಜನರೇ ಆಸ್ತಿ. ನಾಲ್ಕು ಜತೆ ಪಂಚೆ, ಶರ್ಟ್ ಇದೆ. ಇಲ್ಲಿ ಸೇರಿರುವವರಿಗೆ ನಮ್ಮ ಚರ್ಮ ತೆಗೆದು ಪಾದುಕೆ ಮಾಡಿಕೊಟ್ಟರೂ ಸಾಲದು. ಅರಸೀಕೆರೆ ಜನರಿಗೆ ಛಲ ಬಂದಿದೆ. ಸಿದ್ದರಾಮಯ್ಯ ಅವರಿಗೆ ನಾನು ಮೇಕಪ್ ಮಾಡಿದ್ದೇನೆ. ಬಂಡೆಪ್ಪ ಕಾಶಂಪೂರ್ ಮುಂದಿನ ಉಪ ಮುಖ್ಯಮಂತ್ರಿ. ನಮ್ಮ ಹತ್ತಿರ ಇರುವವರು ಒರಿಜಿನಲ್ ಕುರುಬರು, ಡೂಪ್ಲಿಕೇಟ್ ಕುರುಬರಲ್ಲ ಎಂದು ಹೇಳಿದರು.

Exit mobile version