Site icon Vistara News

Karnataka Election 2023: ನಾಯಕನಿಗೆ ಬಿಜೆಪಿ ಟಿಕೆಟ್‌ ಸಿಗಲಿ ಅಂತ ಹರಕೆ ಹೊತ್ತು 25 ಕಿಮೀ ದೀರ್ಘ ದಂಡ ಪ್ರಣಾಮ ಹಾಕಿದ ಅಭಿಮಾನಿ

Suresh Satti long danda namaskar Chikkodi

#image_title

ಚಿಕ್ಕೋಡಿ: ಇನ್ನೇನು ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಟಿಕೆಟ್ ಆಕಾಂಕ್ಷಿ ರಾಜಕೀಯ ನಾಯಕರು ರಾಜಕೀಯ ಪಕ್ಷಗಳ ಟಿಕೆಟ್ ಅನ್ನು ಹೇಗಾದರೂ ಪಡೆಯಲೇಬೇಕು ಅಂತ ಪಕ್ಷಗಳ ವರ್ಚಸ್ವಿ ನಾಯಕರ ಮನೆಯ ಹಿಂದೆ ಮುಂದೆ ಸುಳಿದಾಡುತ್ತಿದ್ದಾರೆ.

ಹರಕೆ ಹೊತ್ತುಕೊಂಡ ಸುರೇಶ್ ಸತ್ತಿ .

ಆದರೆ ಇಲ್ಲೊಬ್ಬರು ಅಭಿಮಾನಿ ತಮ್ಮ ನಾಯಕನಿಗೆ ಬಿಜೆಪಿ ಟಿಕೆಟ್ ಸಿಗಲಿ ಅಂತ ದೇವರಿಗೆ ಹರಕೆ ಹೊತ್ತು ಸುಮಾರು 25 ಕಿಮೀ ದೀರ್ಘ ದಂಡ ಪ್ರಣಾಮ ಹಾಕಿದ್ದಾರೆ. ಬೇಡರಹಟ್ಟಿ ಗ್ರಾಮದ ನಿವಾಸಿ ಸುರೇಶ್ ಸತ್ತಿ ಎಂಬುವವರೇ ದೇವರಿಗೆ ಹರಕೆ ಹೊತ್ತುಕೊಂಡವರು. ಇವರು ತಮ್ಮ ನಾಯಕ ಅಮೂಲ್ ಸರಡೆಗೆ ಟಿಕೆಟ್ ಸಿಗಲಿ ಅಂತ ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದಿಂದ ಚಿಕ್ಕೋಡಿ ತಾಲೂಕಿನ ಯಡೂರು ವೀರಭದ್ರ ದೇವಸ್ಥಾನದವರೆಗೂ ಸುಮಾರು 25 ಕಿಮೀ ದೀರ್ಘದಂಡ ಪ್ರಣಾಮ ಹಾಕಿದ್ದಾರೆ. ಕಾಗವಾಡ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಅಮೂಲ್ ಸರಡೆ ಒಬ್ಬ ಒಳ್ಳೆಯ ನಾಯಕ. ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗಲಿ ಎಂಬ ಉದ್ದೇಶದಿಂದ ಸುರೇಶ್ ಅವರು ಯಡೂರು ವೀರಭದ್ರನಿಗೆ ದೀರ್ಘದಂಡ ಪ್ರಣಾಮ‌ ಹಾಕಿರುವುದಾಗಿ ಹೇಳಿದ್ದಾರೆ.

ನಾಯಕ ಅಮೂಲ್ ಸರಡೆ.

ಇದನ್ನೂ ಓದಿ: ಅವಮಾನಿಸುವ ಉದ್ದೇಶವಿಲ್ಲದೇ ಆ ಕ್ಷಣದ ಜಾತಿ ನಿಂದನೆಗೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸಲ್ಲ ಎಂದ ಹೈಕೋರ್ಟ್

Exit mobile version