Site icon Vistara News

Karnataka Election 2023: ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ನೀಡಿದ್ದ ಆಫರ್‌ ತಿರಸ್ಕರಿಸಿದೆ; ನಟಿ ರಮ್ಯಾ ಹೇಳಿಕೆ; ರಾಜ್ಯ ವಿಧಾನಸಭೆ ಚುನಾವಣೆಯ ಕ್ಷಣಕ್ಷಣದ ಸುದ್ದಿಗಳು

Karnataka Election 2023 Live updates Check details In Kannada
Ramaswamy Hulakodu

ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ ನೀಡಿದ್ದ ಆಫರ್‌ ತಿರಸ್ಕರಿಸಿದ್ದೆ ಎಂದ ನಟಿ ರಮ್ಯಾ

ಆರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಪಕ್ಷದಿಂದ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೀಡಿದ್ದ ಆಫರ್‌ ಅನ್ನು ತಾವು ತಿರಸ್ಕರಿಸಿದ್ದಾಗಿ ನಟಿ ರಮ್ಯಾ ಹೇಳಿದ್ದಾರೆ

ರಾಷ್ಟ್ರೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ಚುನಾವಣಾ ರಾಜಕಾರಣದಲ್ಲಿ ತಮಗೆ ಆಸಕ್ತಿ ಇಲ್ಲ ಎಂದಿದ್ದಾರೆ

Ramaswamy Hulakodu

ಶೃಂಗೇರಿಗೆ ಡಿ ಕೆ ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮತ್ತೆ ಟೆಂಪಲ್‌ ರನ್‌ ನಡೆಸಿದ್ದಾರೆ. ಇಂದು ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ಸಂಜೆ ಶೃಂಗೇರಿ ತಲುಪಿದ್ದಾರೆ.

ಶನಿವಾರ ರಾತ್ರಿ ಶೃಂಗೇರಿಯಲ್ಲಿಯೇ ಉಳಿದುಕೊಳ್ಳಲಿರುವ ಅವರು ನಾಳೆ ನಡೆಯಲಿರುವ ಚಂಡಿಕಾಯಾಗದಲ್ಲಿ ಭಾಗವಹಿಸಲಿದ್ದಾರೆ.

ಡಿಕೆಶಿ ಅವರಿಗೆ ಅಧಿಕಾರ ದೊರೆಯಲಿದೆ ಎಂದು ರಾಜಗುರು ದ್ವಾರಕನಾಥ್‌ ಅವರ ನೇತೃತ್ವದಲ್ಲಿ ಈ ಚಂಡಿಕಾಯಾಗ ನಡೆಯುತ್ತಿದೆ.

Ramaswamy Hulakodu

ವರುಣ ಕಾಂಗ್ರೆಸ್‌-ಬಿಜೆಪಿ ಭರ್ಜರಿ ಪ್ರಚಾರ

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಭರ್ಜರಿ ಪ್ರಚಾರ ನಡೆಸಿವೆ.

ಬಿಜೆಪಿ ನಾಯಕರ ದಂಡೇ ವಿ. ಸೋಮಣ್ಣ ಪರ ಪ್ರಚಾರ ನಡೆಸುತ್ತಿದೆ.

ಸಿದ್ದರಾಮಯ್ಯ ಕೂಡ ಬಿರುಸಿನ ಪ್ರಚಾರ ನಡೆಸಿದ್ದು, ಎಸ್‌.ಸಿ. ಮತಗಳು ವಿಭಜನೆಯಾಗಿ ತಮಗೆ ಹಿನ್ನಡೆಯಾಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ.

Ramaswamy Hulakodu

ಕಾಂಗ್ರೆಸ್‌ ಸೇರಿದ ರಾಣಿ ಸಂಯುಕ್ತ

ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ವಿಧಾರನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಮತ್ತು ಪಕ್ಷದ ನಾಯಕ ಜಯರಾಂ ರಮೇಶ್ ಸಮ್ಮುಖದಲ್ಲಿ ಅವರು ಕಾಂಗ್ರೆಸ್‌ ಸೇರಿದರು.

ರಾಣಿ ಸಂಯುಕ್ತ ವಿಜಯನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

Ramaswamy Hulakodu

ನಾಳೆಯಿಂದ ಸಿಎಂ ಜಯವಾಹಿನಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆಯಿಂದ ಪ್ರಚಾರ ಆರಂಭಿಸಲಿದ್ದು, ಜಯವಾಹಿನಿ ಎಂಬ ಯಾತ್ರೆ ಕೈಗೊಳ್ಳಲಿದ್ದಾರೆ.

ಏಪ್ರಿಲ್‌ 23 ರಿಂದ ಮೇ 7 ರವರೆಗೂ ನಿರಂತರ ಯಾತ್ರೆ ಮಾಡಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಲಾಗಿದೆ.

Exit mobile version