Site icon Vistara News

Karnataka Election 2023: ಟಿಕೆಟ್‌ ನೀಡದೆ ಕಾಂಗ್ರೆಸ್‌ ನನಗೆ ಮೋಸ ಮಾಡಿದೆ: ಅಖಂಡ ಶ್ರೀನಿವಾಸಮೂರ್ತಿ

ಅಖಂಡಶ್ರೀನಿವಾಸಮೂರ್ತಿ

ಅಖಂಡಶ್ರೀನಿವಾಸಮೂರ್ತಿ

ಬೆಂಗಳೂರು: ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ (Pulakeshinagar Assembly Constituency) ಬಿಎಸ್​ಪಿ ಅಭ್ಯರ್ಥಿ (BSP candidate) ಅಖಂಡ ಶ್ರೀನಿವಾಸಮೂರ್ತಿ ಸೋಮವಾರ (ಮೇ 8) ಮನೆ ಮನೆಗೆ ತೆರಳಿ ಮತಯಾಚಿಸಿದರು. ಬಹಿರಂಗ ಪ್ರಚಾರಕ್ಕೆ ಸೋಮವಾರ ಕೊನೇ ದಿನವಾದ ಹಿನ್ನೆಲೆ ಪುಲಕೇಶಿನಗರ ವ್ಯಾಪ್ತಿಯ ದೊಡ್ಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂರಾರು ಬೆಂಬಲಗರ ಜತೆ ಮನೆ ಮನೆಗೆ ತೆರಳಿದ ಅಖಂಡಗೆ ಕಾರ್ಯಕರ್ತರು, ಅಭಿಮಾನಿಗಳು ಹೂ ಚೆಲ್ಲುವ ಮೂಲಕ ಸ್ವಾಗತ ಕೋರಿದರು. ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ಕ್ಷೇತ್ರದಲ್ಲಿ ಜನರು ಪ್ರೀತಿ ತೋರಿಸುತ್ತಿದ್ದಾರೆ, ಈ ಬಾರಿ ಗೆಲ್ಲುವ ವಿಶ್ವಾಸವಿದೆ ಎಂದರು.

ಇದೇ ವೇಳೆ ಕಾಂಗ್ರೆಸ್ ಟಿಕೆಟ್​ ನೀಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಖಂಡ ಶ್ರೀನಿವಾಸಮೂರ್ತಿ, ಕಾಂಗ್ರೆಸ್ ಮೋಸ ಮಾಡಿದೆ ಎಂದು ಬೇಸರ ಹೊರಹಾಕಿದ್ದಲ್ಲದೆ, ಜನರಿಗೆ ಸತ್ಯದ ಅರಿವು ಇದೆ. ನಾನು ಕ್ಷೇತ್ರದಲ್ಲಿ ಮಾಡಿದ ಕೆಲಸವು ನನ್ನನ್ನು ಕೈ ಹಿಡಿಯಲಿದೆ. ಹೋದ ಕಡೆಗಳಲ್ಲೆಲ್ಲ ನಾಗರಿಕರು ನನಗೇ ಮತ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

Exit mobile version