Site icon Vistara News

Karnataka Election 2023: ಮೋದಿ ನಾಲಾಯಕ್‌ ಎಂದು ಹೇಳಿದ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ದೂರು; ರಾಜ್ಯ ವಿಧಾನಸಭೆ ಚುನಾವಣೆ ಕಣದ ಪ್ರಮುಖ ಸುದ್ದಿಗಳು

Karnataka Election 2023 Live updates Check details In Kannada
B Somashekhar

ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ದೂರು

ಮೋದಿ ನಾಲಾಯಕ್‌ ಎಂದು ಹೇಳಿಕೆ ನೀಡಿದ ಹಿನ್ನೆಲೆ ದೂರು

ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡಿದ ಕರ್ನಾಟಕ ಬಿಜೆಪಿ

Ramaswamy Hulakodu

ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ: ಅಶೋಕ್ ಗೆಹ್ಲೋಟ್

ರಾಜಸ್ಥಾನದಲ್ಲಿ ನಾವು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂದಿದ್ದಾರೆ.

ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರಚಾರಕ್ಕೆ ಬಂದಾಗ ಕಾಂಗ್ರೆಸ್‌ ರಾಜಸ್ಥಾನದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದಿದ್ದರು.

B Somashekhar

ಮಾಧ್ಯಮದವರ ಮೇಲೆಯೇ ಮಲ್ಲಿಕಾರ್ಜುನ ಖರ್ಗೆ ಗರಂ

ಮೋದಿ ನಾಲಾಯಕ್‌ ಎಂದು ಪ್ರಿಯಾಂಕ್‌ ಖರ್ಗೆ ಹೇಳಿಕೆ ವಿಚಾರ

ಪ್ರಿಯಾಂಕ್‌ ಹೇಳಿರುವುದೇ ಒಂದು, ನೀವು ತೋರಿಸುತ್ತಿರುವುದೇ ಒಂದು

ಸುದ್ದಿ ಮಾಡುತ್ತಿದ್ದೀರಿ, ಮಾಡಿ ಎಂದು ಗರಂ ಆದ ಖರ್ಗೆ

B Somashekhar

ನಾಲಗೆ ಹರಿಬಿಟ್ಟ ಬಸನಗೌಡ ಪಾಟೀಲ್‌ ಯತ್ನಾಳ್‌

ರಾಹುಲ್‌ ಗಾಂಧಿ ಹುಚ್ಚ ಅಲ್ಲ, ಅರೆಹುಚ್ಚ ಎಂದ ಬಿಜೆಪಿ ಶಾಸಕ

ಆಲೂಗಡ್ಡಿಯಿಂದ ಚಿನ್ನ ತೆಗೆಯುತ್ತೇನೆ ಎನ್ನುತ್ತಾರೆ

ದೇಶವಿರೋಧಿಗಳ ಜತೆ ಕೈಜೋಡಿಸುತ್ತಾರೆ

ಹಾಗಾಗಿ ಅವರು ಅರೆಹುಚ್ಚ ಎಂದು ಯತ್ನಾಳ್‌ ವಾಗ್ದಾಳಿ

Ramaswamy Hulakodu

ದೇಶ ಒಡೆಯುವ ಕೆಲಸ : ಖರ್ಗೆ

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಪ್ರಣಾಳಿಕೆಯಲ್ಲಿ ಏಕ ರೂಪ ನಾಗರಿಕ ಕಾಯ್ದೆ ಜಾರಿಯ ಭರವಸೆ ನೀಡಿರುವುದನ್ನು ಖಂಡಿಸಿದ್ದು, ದೇಶ ಉದ್ದಾರ ಮಾಡುವ ಕಾರ್ಯಕ್ರಮ ಬಿಜೆಪಿ ಬಳಿ ಇಲ್ಲ ಎಂದು ಕಿಡಿ ಕಾರಿದ್ದಾರೆ.

ದೇಶ ಒಡೆಯುವುದೇ ಬಿಜೆಪಿ ಕೆಲಸ. ಸಮಾಜದಲ್ಲಿ ಶಾಂತಿ ಇರಬಾರದು ಎಂಬ ಉದ್ದೇಶದಿಂದ ಬಿಜೆಪಿ ಈ ರೀತಿಯ ಭರವಸೆಗಳನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

Exit mobile version