Site icon Vistara News

Karnataka Election 2023: ಮೋದಿ ನಾಲಾಯಕ್‌ ಎಂದು ಹೇಳಿದ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ದೂರು; ರಾಜ್ಯ ವಿಧಾನಸಭೆ ಚುನಾವಣೆ ಕಣದ ಪ್ರಮುಖ ಸುದ್ದಿಗಳು

Karnataka Election 2023 Live updates Check details In Kannada
Ramaswamy Hulakodu

ಬಿಜೆಪಿ ಪ್ರಣಾಳಿಕೆ ಬಿಡುಗಡೆ

5 ಕೆಜಿ ಅಕ್ಕಿ ಜೊತೆಗೆ 5 ಸಿರಿಧಾನ್ಯ

ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್‌ ಉಚಿತ

Ramaswamy Hulakodu

ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯಾಗಿದೆ….

Ramaswamy Hulakodu

ಬಿಜೆಪಿಯ ಪ್ರಣಾಳಿಕೆ ಬಿಡುಗಡೆ

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಬಿಜೆಪಿಯ ಪ್ರಣಾಳಿಕೆ ಬಿಡುಗಡೆಗೊಂಡಿದೆ.

Ramaswamy Hulakodu

ಮೋದಿಯವರನ್ನು ನಾಲಾಯಕ್‌ ಎಂದ ಪ್ರಿಯಾಂಕ ಖರ್ಗೆ

ಚಿತ್ತಾಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಪ್ರಧಾನಿ ಮೋದಿ ಅವರನ್ನು ನಾಲಾಯಕ್‌ ಎಂದು ಕರೆದಿದ್ದಾರೆ.

ಬಂಜಾರ ಸಮುದಾಯಕ್ಕೆ ಪ್ರಧಾನಿ ಮೋದಿ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದರು. ಇದನ್ನು ಪ್ರಸ್ತಾಪಿಸಿದ ಪ್ರಿಯಾಂಕ ಖರ್ಗೆ, ʻಇಂತಹ ನಾಲಾಯಕ್ ಮಗ ಇದ್ದರೆ ಮನೆ ನಡೆಸೊಕೆ ಆಗುತ್ತಾ….? ʼ ಎಂದು ಪ್ರಶ್ನಿಸಿದ್ದಾರೆ.

Harish Kera

ಸಿದ್ದರಾಮಯ್ಯ ಪರ ಪ್ರಚಾರಕ್ಕೆ ನಟಿ ರಮ್ಯಾ, ದುನಿಯಾ ವಿಜಿ

ಚಾಮರಾಜನಗರ: ವರುಣಾ ಕ್ಷೇತ್ರದಲ್ಲಿ ‌ಸಿದ್ದರಾಮಯ್ಯ ಪ್ರಚಾರಕ್ಕೆ ತಾರಾ ಮೆರುಗು ಬರಲಿದ್ದು, ಮೇ 4ರಂದು ಭರ್ಜರಿ ರೋಡ್ ಶೋ ನಡಸಲಿದ್ದಾರೆ. ಇದರಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಹಾಗೂ ದುನಿಯಾ ವಿಜಿ ಭಾಗಿಯಾಗಲಿದ್ದಾರೆ.

Exit mobile version